ನೋಡ ಬಾ ನಮ್ಮೂರ ಸಸ್ಯಲೋಕ "
ಉತ್ತರಕನ್ನಡ ಜಿಲ್ಲೆಯ ಸಹ್ಯಾದ್ರಿಯ ಶೃಂಗ ಶಿರಸಿಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಬಕ್ಕಳ ಎಂಬ ಪುಟ್ಟ ಹಳ್ಳಿ ನಮ್ಮೂರು. ಬಕುಲಾಪುರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮ ಇಂದು ಬಕ್ಕಳ ಎಂದು ತನ್ನ ಹೆಸರನ್ನು ಕಿರಿದಾಗಿಸಿಕೊಂಡಿದೆ. ಹೆಸರೇನೋ ಚಿಕ್ಕದಾಗಿರಬಹುದು ಆದರೆ ಊರಿನ ಕೀರ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಕಾರಣ ಮಾನವನ ಪರಿಸರ ಪ್ರೀತಿಯ ಪ್ರತೀಕವಾಗಿ ನಿರ್ಮಿಸಿರುವ ಬಕ್ಕಳ ಸಸ್ಯಶಾಸ್ತ್ರೀಯ ವನ ಹಾಗೂ ನಿಸರ್ಗದ ಮಡಿಲಿನಲ್ಲಿರುವ ಧಾರ್ಮಿಕ ಕೇಂದ್ರ ಶ್ರೀ ಸತ್ಯನಾಥೇಶ್ವರ ದೇವಾಲಯ. ಸಾಮಾನ್ಯವಾಗಿ ಉತ್ತರಕನ್ನಡ ಪ್ರವಾಸ ಕೈಗೊಂಡವರು ಶಾಸ್ತ್ರೀಯ ವನಕ್ಕೆ ಭೇಟಿ ಕೊಡದೆ ತಮ್ಮ ಯಾನವನ್ನು ಕೊನೆಗೊಳಿಸುವುದೇ ಇಲ್ಲ ಅದರಲ್ಲೂ ಜೀವ ವೈವಿಧ್ಯತೆಯ ಪ್ರೀತಿ ಹೊಂದಿರುವ, ವೈದ್ಯಕೀಯ ಆಸಕ್ತಿ ಹೊಂದಿರುವ ಆಯುರ್ವೇದದ ಕುರಿತು ಜ್ಞಾನ ಪಡೆಯಲಿಚ್ಚಿಸುವ ಜನರಿಗೆ ಶಾಸ್ತ್ರೀಯ ವನ ಒಂದು ಹಾಟ್ ಝೋನ್ ಇದ್ದಂತೆ. ಸಸ್ಯ ಸಂಕುಲದ ಮಹತ್ವವನ್ನು ಜನರಿಗೆ ತಿಳಿಸುವುದು ಹಾಗೂ ಆ ಮೂಲಕ ಔಷದೀಯ ಸಸ್ಯಗಳ ಉಪಯುಕ್ತತೆಯನ್ನು ಬಹಿರಂಗಪಡಿಸುವುದು ಶಾಸ್ತ್ರೀಯ ವನದ ಮುಖ್ಯ ಉದ್ದೇಶ ಆದುದರಿಂದಲೇ ವಿಭಿನ್ನ ರೀತಿಯ ಸಸ್ಯಗಳನ್ನು ಒಂದೆಡೆ ಸಂಗ್ರಹಿಸಿ ಅವುಗಳನ್ನು ಬೆಳೆಸಲಾಗುತ್ತಿದೆ ಕರ್ನಾಟಕ ಅರಣ್ಯ ಇಲಾಖೆಯು ಈ ವನದ ಸಂಪೂರ್ಣ ಜವಾಬ್ದಾರಿ ಹೊಂದಿದ್ದು ಜೀವವೈವಿಧ್ಯತೆಯನ್ನು ಉಳಿಸಿ ಬೆಳೆಸಲು ಶ್ರಮಿಸುತ್ತಿದೆ ಶಾಸ್ತ್ರೀಯ ವನದ ವಿಶೇಷತೆ: ಮರದಿಂದ ನಿರ್ಮಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ