ಪೋಸ್ಟ್‌ಗಳು

 “ಹೋರಿ ಹಬ್ಬ”  ಹೋರಿ ಹಬ್ಬ, ಹಟ್ಟಿ ಹಬ್ಬ, ಅಥವಾ ಕೊಬ್ಬರಿ ಹೋರಿ ಸ್ಪರ್ಧೆಯು ಒಂದು ಗ್ರಾಮೀಣ ಕ್ರೀಡೆಯಾಗಿದ್ದು, ಇದರಲ್ಲಿ ನೂರಾರು ತರಬೇತಿ ಪಡೆದ ಮತ್ತು ಅಲಂಕರಿಸಿದ ರಾಸುಗಳು ಮತ್ತು ಗೂಳಿಗಳನ್ನು ಭಾರಿ ಜನಸಂದಣಿಯ ನಡುವೆ ಓಡಿಸಲಾಗುತ್ತದೆ . ಈ ಗೂಳಿಗಳ ಕೊರಳಿಗೆ ಕೊಬ್ಬರಿ ಗಳನ್ನು ಕಟ್ಟಲಾಗಿರುತ್ತದೆ. ಗೂಳಿ ಹಿಡಿಯುವವರು , ಈ ಗೂಳಿಯ ಕೊರಳಲ್ಲಿ ಇರುವ ಕೊಬ್ಬರಿಯನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕ್ರೀಡೆಯನ್ನು ಮುಖ್ಯವಾಗಿ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.ನಮ್ಮ ಹಾವೇರಿ ಜೆಲ್ಲೆಯನು ಹೋರಿಹಬ್ಬದ ತ್ತವರೂರು ಎಂದು ಕರೆಯುತ್ತಾರೆ.                 ಹೋರಿಗಳ ಮಾಲೀಕರು ಋತುವಿನ ಮುಂಚೆಯೇ ಅವುಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಅವುಗಳನ್ನು ಹೋರಿಹಬ್ಬಕ್ಕಾಗಿ ತಯಾರು ಮಾಡುತ್ತಾರೆ. ಅವರು ಅವುಗಳನ್ನು ಮುದ್ದಿಸುತ್ತಾರೆ, ಅವುಗಳನ್ನು ತಂಪಾಗಿರಿಸಲು ನಿಯಮಿತವಾಗಿ ಸ್ನಾನವನ್ನು ಮಾಡಿಸುತ್ತಾರೆ.ಇದರಿಂದಾಗಿ ಗೂಳಿಗಳು ನಿಸ್ಸಂದೇಹವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ. ಹತ್ತಿರದ ಪ್ರದೇಶಗಳ ಮಾಲೀಕರು ಎತ್ತುಗಳನ್ನು ನಿಯಮಿತವಾಗಿ ಓಡಿಸುವ ಮೂಲಕ ನಿಜವಾದ ಅಖಾಡದ ಓಟಕ್ಕೆ ತರಬೇತಿ ನೀಡುತ್ತಾರೆಯಾವುದೇ ಎರಡು ಜಾನುವಾರುಗಳನ್ನು ಸಾಕಷ್ಟು ಸಮಯದ ...
 ಸ್ನೇಹ  ಇದು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂದ ದ ಶುದ್ಧ ರೂಪವಾಗಿದೆ. ಇದು ಜನರ ನಡುವಿನ ಪರಸ್ಪರ ಪ್ರೀತಿ. ಆದರೆ, ಇದು ಕೇವಲ ಪರಸ್ಪರ ಪ್ರೀತಿಯೇ..?  ಯಾವಾಗಲೂ ಅಲ್ಲ, ಉತ್ತಮ ಸ್ನೇಹಿತರು ಪರಸ್ಪರರ ಭಾವನೆಗಳನ್ನು ಅಥವಾ ಕಲ್ಪನೆಗಳನ್ನು ಹಂಚಿಕೊಳ್ಳುತ್ತಾರೆ, ಅದು ಸಮೃದ್ಧಿ & ಮಾನಸಿಕ ನೆರವೇರಿಕೆಯ ಭಾವನೆಯನ್ನು ತರುತ್ತದೆ.               ಒಬ್ಬ ಸ್ನೇಹಿತನು ಒಬ್ಬ ವ್ಯಕ್ತಿಯನ್ನು ಆಳವಾಗಿ ತಿಳಿದುಕೊಳ್ಳಬಹುದು, ಮತ್ತು ಶಾಶ್ವತವಾಗಿ ನಂಬಬಹುದು. ಸ್ನೇಹಕ್ಕೆ ಸಂಬಂಧಿಸಿರುವ ಇಬ್ಬರು ವ್ಯಕ್ತಿಗಳ ಕಲ್ಪನೆಯಲ್ಲಿ ಕೆಲವು ಹೋಲಿಕೆಗಳನ್ನು ಹೊಂದುವ ಬದಲು, ಅವರು ಅಸಾಮಾನ್ಯ ಗುಣಗಳನ್ನು ಹೊಂದಿದ್ದರು ಅವರು ತಮ್ಮ ಅನನ್ಯತೆಯನ್ನು ಬದಲಿಸದೆ ಪರಸ್ಪರ ಇರಲು ಬಯಸುತ್ತಾರೆ. ಬಹುಮಟ್ಟಿಗೆ, ಸ್ನೇಹಿತರು ಖಂಡನೆ ಇಲ್ಲದೇ ಒಬ್ಬರನ್ನೊಬ್ಬರು  ಪ್ರಚೋದಿಸುತ್ತಾರೆ.  ಕೆಲವೊಮ್ಮೆ ಉತ್ತಮ ಸ್ನೇಹಿತರು ಪರಿಶೀಲಿಸುತ್ತಾರೆ ಧನಾತ್ಮಕ ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತಾರೆ.                ಜೀವನದಲ್ಲಿ ಸ್ನೇಹಿತರನ್ನು ಹೊಂದಿರುವುದು ಬಹಳ ಮುಖ್ಯ. ಪ್ರತಿಯೊಬ್ಬ ಸ್ನೇಹಿತನು ಅತ್ಯ ಗತ್ಯ್ ಮತ್ತು ಕೆಲವು ಸಂದರ್ಭಗಳಲ್ಲಿ ಹೊರಹೊಮಿದಾಗ ಅವರ ಮಹತ್ವ ನಮಗೆ ತಿಳಿದಿರುತ್ತದೆ ಅದನು ತಮ್ಮ ಸ್ನೇಹಿತರು ಬೆಂಬಲಿಸಬೇಕು .ಅವನು ಅಥವಾ ಅ...
 *✰━ ಅಪ್ಪ ಎಂದರೆ ಆಕಾಶ ━✰* ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು.  ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲಾ ಕೈಲಾದಷ್ಟು ಕೊಡಿಸುವವನು... ಅಪ್ಪ ಅಂದ್ರೆ ಕುಟುಂಬದ ಶಕ್ತಿ... ಮಕ್ಕಳಿಗೆ ಮೊದಲ ಹೀರೋ... ಅಪ್ಪ ಅಂದ್ರೆ ಆಕಾಶ...                    ಪ್ರತಿ ಸಂಸಾರದ ಆಧಾರಸ್ತಂಭವಾಗಿ ಮನೆಯವರ ಪೊರೆಯನ್ನು, ಸಂಭಾಳಿಸುವ ಅದ್ಬುತ ಶಕ್ತಿಯೇ ಅಪ್ಪ ! ಅಮ್ಮ ಮನೆಯ ನಂದಾದೀಪವಾದರೆ ಅಪ್ಪ ಮನೆಯೊಳಗು, ಹೊರಗೂ ಪ್ರಜ್ವಲಿಸುವ ದೀಪ. ಇಡೀ ಜಗವು ಪ್ರತಿ ಬಾರಿ ಅಮ್ಮನನ್ನು ದೈವೀ ಸ್ವರೂಪ,  ಮಮತೆಯ - ಕಾಳಜಿಯ ಸಂಕೇತವೆಂದು ಸಾರುತ್ತದೆ ಆದರೆ ಅಪ್ಪ ಎಂಬ ಅಗಣಿತ ಪ್ರೇಮ,  ಶಿಸ್ತಿನ ಶಕ್ತಿಯನ್ನು ನೆನೆಪಿಸಿಕೊಳ್ಳುವುದು ಕೇವಲ "ಅಪ್ಪಂದಿರ ದಿನಕ್ಕೆ" ಮಾತ್ರ !               ಮಕ್ಕಳು ಅತ್ತಾಗ, ನೋವಾದಾಗ ಕೂಡಲೇ ತಾಯಿಯು ಕಳವಳಗೊಂಡು ಮಮಕರಿಸಿ, ಒಲುಮೆಯ ಧಾರೆ ಹರಿಸಿ ಸಂತೈಸುವುದು ಹೌದಾದರೂ, ತಂದೆ ಎಂಬ ಭಾವ ತನಗೇನು ಸಂಬಂಧವಿಲ್ಲದಂತೆ ಒಮ್ಮೊಮ್ಮೆ ವರ್ತಿಸಿದರೂ, ಅಮ್ಮ ಮಕ್ಕಳ ಮಮಕಾರವನ್ನು ಕಣ್ಣಲ್ಲೇ ತುಂಬಿಕೊಂಡು, ಒಳಗೊಳಗೇ ಸಂಭ್ರಮಿಸುವ  ಪರಿ ಕೇವಲ ಅಮ್ಮನಿಗೆ ಮಾತ್ರ ತಿಳಿಯುವಂತದ್ದು. ತನ್ನ ಪ್ರೇಮ ಅತಿಯಾದ ಕಾಳಜಿ ತನ್ನ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದೆಂದು,  ತನ್ನೆಲ್ಲಾ ಅಕ...
 *ಗುರಿ ಇಲ್ಲದ ವಿದ್ಯಾರ್ಥಿ ಜೀವನ ನಿಯಂತ್ರಿಸಲು ಹಾಸ್ಟೆಲ್ ಉತ್ತಮ ದಾರಿ:* ದಿನೇ ದಿನೇ ನಮ್ಮ ಶಿಕ್ಷಣ ಜಗತ್ತು ಬದಲಾವಣೆಯಾಗುವ ಹಾಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಂಬಲಿಸುತ್ತ ದೂರದ ಊರಿಗೆ ಪಯಣ ಬೆಳೆಸುತ್ತಿದ್ದಾರೆ ಶಿಕ್ಷಣವು ವಿದ್ಯಾರ್ಥಿ ಜೀವನದ ಹೊಸ ತಿರುವನ್ನುಕೊಡುತ್ತಿದೆ ದೂರದ ಊರಿಗೆ ಹೋದಾಗ ಹಾಸ್ಟೆಲ  ಎಂಬುದು ಎಲ್ಲರಿಗೂ ಅನಿವಾರ್ಯವಾಗುತ್ತದೆ ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸುವಾಗ ಪೋಷಕರು ಹೆಚ್ಚಾದ ಆತಂಕ ಪಡುತ್ತಾರೆ ಕಾರಣ ಏನೆಂದರೆ ಅಲ್ಲಿ ಅಪ್ಪ ಅಮ್ಮ ಮತ್ತು ಸಹೋದರರ ಪ್ರೀತಿ ಸಿಗುವುದಿಲ್ಲ ಎಂಬ ಆತಂಕ ಹಾಗೂ ಇಷ್ಟವಾದ ಆಹಾರ ಸಿಗುವುದಿಲ್ಲ ಸರಿಯಾದ ಪಾಲನೆ ಸಿಗುವುದಿಲ್ಲ ಇದರ ಜೊತೆಗೆ ಹಬ್ಬ ಹರಿದಿನ ಬಂದರೆ ಮಕ್ಕಳು ಮನೆಗೆ ಬರುವುದಿಲ್ಲ ಹಾಗಾಗಿ ಕೆಲ ಪೋಷಕರು ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿಯುತ್ತಾರೆ, ಆದರೆ ಹಾಸ್ಟೆಲ್ ಗೆ ಹೂಕ್ಕ ಮೇಲೆ ಅಲ್ಲಿನ ನೀತಿ ನಿರೂಪಣೆ ತಕ್ಕಂತೆ ನಡೆದುಕೊಂಡಲ್ಲಿ ಮನೆಯಿಂದ ಸಿಗುವ ಮೌಲ್ಯಗಳು ಜೊತೆಗೆ ಸ್ವಾಲಂಬಿ ಬದುಕು ಸಹ ಬಾಳ್ವೆ ಮೊದಲಾದ ಜೀವನ ರೂಪಿಸುವ ಮೌಲ್ಯಗಳು ದೊರೆಯುತ್ತದೆ ಅನ್ನುವುದು ಅಷ್ಟೇ ಸತ್ಯ. ಮನೆಯಲ್ಲಿ ಅಪ್ಪ ಅಮ್ಮನ ಶಿಸ್ತಿನ ಗರಡಿಯಲ್ಲಿ ಇರುವ ಮಕ್ಕಳು ಒಮ್ಮೊಮ್ಮೆ ಯಾಮಾರಿಸಿ ತನ್ನಿಷ್ಟದಂತೆ ನಡೆಯುವುದುಂಟು ಆದರೆ ಹಾಸ್ಟೆಲ್ ನಲ್ಲಿ ಆ ತರಹ ಮಾಡುವುದು ಅಷ್ಟು ಸುಲಭವಲ್ಲ‌. ಆರಂಭದ ದಿನಗಳಲ್ಲಿ ಕೊಂಚ ಕಷ್ಟ ಅನಿಸಿದರೆ ಅದನ್ನು ಸಹಿಸಿಕೊಂಡು ನಿಂತರೆ, ಅ...
 "__ನಮ್ಮ  ಕಲೆ  ಯಕ್ಷಗಾನ__" ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣ ಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ .                                         ಯಕ್ಷಗಾನವು ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಪ್ರಸ್ತುತಪಡಿಸುವ ಒಂದು ನಾಟಕೀಯ ರೂಪವಾಗಿದೆ.ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ  ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇದರಲ್ಲಿ ಎರಡು ಪ್ರಕಾರಗಳಿವೆ.ಒಂದು ತೆಂಕುತಿಟ್ಟು ಇದು ದಕ್ಷಿಣ ಕನ್ನಡದಿಂದ ತುಳುನಾಡು ಪ್ರದೇಶದ ಕಾಸರಗೋಡಿನವರೆಗೆ ಯಕ್ಷಗಾನದ ರೂಪವನ್ನು ತೆಂಕುತಿಟ್ಟು ಎನ್ನುವರು.ಮತ್ತು ಎರಡನೆಯದು ಬಡಗುತಿಟ್ಟು ಇದು ಉಡುಪಿಯಿಂದ ಉತ್ತರ ಕನ್ನಡದವರೆಗೆ ಬಡಗುತಿಟ್ಟು ಎನ್ನುವರು.ಈ ಎರಡು ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಈ ಕಲೆಯು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದೇ ನಮ್ಮ ಹೆಮ್ಮೆ.                                         ಯಕ್ಷಗಾನದ ಪ್ರಮುಖ ಅಂಶಗಳು:–     1) ಪ್ರಸಂಗ:   ಯಕ್ಷಗಾನದಲ್ಲಿ ಯಾವುದಾದರೂ ಒಂದು ...
 ಭೂಮಿಯಿಂದ ಸೂರ್ಯ ಬಹಳಷ್ಟು ದೂರವಿದ್ದಾನೆ ಆದರೆ ನಮ್ಮ ಆಲೋಚನೆ ಪ್ರಕಾರ ತೆಂಗಿನಮರದ ಹಾಗೆ ಎತ್ತರವಿರುವ ಅದರ ತುತ್ತ ತುದಿಯಲ್ಲಿ  ಹಲವಾರು ಕಾಯಿಗಳ ಸಮೂಹವಿದೆ ಆದರೆ ತೆಂಗಿನ  ಮರಕ್ಕಿಂತ ಸ್ವಲ್ಪ ಕಿರಿದಾಗಿ ನಮ್ಮ ಮುಂದಕ್ಕೆ  ಕೈಹಿಡಿದು, ಕರೆದುಕೊಂಡು ಹೋಗುವುದೇ ಬೀದಿ ದೀಪ  ಬೀದಿ ದೀಪದ ಕಂಬವು ಅನೇಕ ತಂತಿಗಳಿದ ಸುತ್ತಿಕೊಂಡು ಕೆಲವು ತಂತಿಗಳು ಅನೇಕ ಮನೆಗಳಿಗೆ ಸಹಕರಿಸಿ ವಿದ್ಯುತ್ತನ್ನು ಪೂರೈಸುವ ಮೂಲಕ ಮನೆ ಬೆಳಗುತ್ತಿದೆ ಜನರು ಸೂರ್ಯನ ಹತ್ತಿರ ಹೋಗುವುದು ಒಂದು ಹಾಸ್ಯಸ್ಪದ ಮಾತಾಗಿದೆ ಬೀದಿ ದೀಪವನ್ನು ನೋಡಿ ಸೂರ್ಯನಂತೆ ಕಲ್ಪಿಸಿಕೊಂಡರೆ ಮಾನವನ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಒಂದು ಕ್ಷಣ ನಾವು ಯೋಚಿಸೋಣ ಬೀದಿ ದೀಪಗಳ ಒಂದು ವಿಷಯವಿಲ್ಲದಿದ್ದರೆ ಎಷ್ಟು ಸಾವು ನೋವು ಸಂಭವಿಸುವುದು ಎಂದು ಪ್ರತಿಯೊಂದು ಕೆಲಸದಲ್ಲಿ ವಿದ್ಯುತ್ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದೆ ಪ್ರತಿಯೊಂದು ಬೀದಿ ದೀಪವು ಹೋಗುವರಿಗೆ ಮಾರ್ಗಸೂಚಿಯಾಗಿದೆ ವಿವಿಧ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಬೀದಿದೀಪವು ಅನಿವಾರ್ಯವಾಗಿದೆ ಪಂದ್ಯಾವಳಿಗಳಲ್ಲಿ ಮನೋರಂಜನ ಕಾರ್ಯಕ್ರಮದಲ್ಲಿ ಅಗತ್ಯವಾಗಿದೆ ಬೀದಿ ದೀಪದ ಮೂಲವಾದ ವಿದ್ಯುತ್ ಉತ್ಪಾದನೆ ಮತ್ತು ರಫ್ತಿನಲ್ಲಿ ಅನೇಕ ಬದಲಾವಣೆಯಾದರೆ ಕೈಗೊಂಡಂತ ಕಾರ್ಯಗಳು ಸ್ಥಗಿತಗೊಳ್ಳುವುದು ನಾವು ಗಮನಿಸಬಹುದು ರಸ್ತೆಯಲ್ಲಿ ರಾತ್ರಿ ನಡೆದಾಡುವವರಿಗೆ ಅತ್ಯುತ್ತಮವಾದ ಸಾಧನವಾಗಿದೆ ಹಾಗೆ ಯಾವುದೇ ಪಕ್ಷ...

ಅಳಿವಿನಂಚಿನಲ್ಲಿರುವ ಕಗ್ಗ

ಇಮೇಜ್
              ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಗೋವಿಗೆ ಅಗ್ರಮಾನ್ಯ ಸ್ಥಾನವನ್ನು ಕಲ್ಪಿಸಲಾಗಿದೆ. ಹಿಂದುಗಳಿಗೆ ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇವೆ ಎಂಬ ನಂಬಿಕೆಯಿಂದ ಗೋವು ಪೂಜ ನಿಯವಾಗಿದೆ.ಹಳೆಯ ಕಾಲದಿಂದಲೂ ಭಾರತದ ಜನರು ಗೋವುಗಳ ಸಾಕಾಣಿಕೆ ಮಾಡಿದ್ದರಿಂದ ಅನೇಕ ದೇಶಿಯ ತಳಿಗಳ ಹುಟ್ಟಿಗೆ ಹಾಗೂ ಬೆಳವಣಿಗೆಗೆ ಕಾರಣವಾಯಿತು.ಗಿರ್, ಸಾಹಿವಾಲ , ರೆಡ್ ಸಿಂಧಿ, ಕಾಂಕ್ರೇಜ್, ಹಳ್ಳಿಕಾರ್, ಮಲೆನಾಡು ಗಿಡ್ಡ ಹೀಗೆ ಇನ್ನಿತರ ಕೆಲವೇ ಕೆಲವು ತಳಿಗಳು ಮಾತ್ರ ಇಂದು ಹೆಚ್ಚಾಗಿ ಕಾಣಿಸುತ್ತಿವೆ.               ಅಳಿವಿನಂಚಿನಲ್ಲಿರುವ ಭಾರತೀಯ ಗೋತಳಿಗಳ ಪಟ್ಟಿಗೆ ಒಂದು ಕಾಲನ್ನು ಕಿತ್ತಿಟ್ಟ ವಿಶಿಷ್ಟ ತಳಿ ಕಗ್ಗ .ಇವು ಮಲೆನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಕಾಣಸಿಗುತ್ತವೆ.ಹಿಂದೆ ಈ ತಳಿಯ ಹೋರಿಗಳನ್ನು ಹೊಲವನ್ನು  ಉಳುಮೆ ಮಾಡಲು ಬಳಸುತ್ತಿದ್ದರು .ಇವು ಕಪ್ಪು, ಬಿಳಿ,  ನಸುಗೆಂಪು,  ಬೂದು,  ಹೀಗೆ ನಾನಾ ವರ್ಣದಲ್ಲಿ ಕಂಡು ಬರುತ್ತವೆ. ಬಹುಶಹ ಮಲೆನಾಡು ಗಿಡ್ಡ, ಓಂಗೋಲ್ ಮತ್ತು ಕಿಲಾರಿ ತಳಿಗಳ ಮಿಶ್ರಣದಿಂದ ಉತ್ಪತ್ತಿಯಾದ ಜಾತಿಯಾಗಿದೆ.ಹೋರಿಗಳು ಓಂ ಗೋಲ್  ತಳಿಯಂತೆ ದೇಹದ ರೂಪವನ್ನು ಹೊಂದಿರುತ್ತವೆ. ಮಲೆನಾಡು ಗಿಡ್ಡಕ್ಕಿಂತ ಬಲವಾದ ಕಾಲುಗಳನ್ನು ಹೊಂದಿದ್ದು, ಗಾತ್ರದಲ್ಲೂ ಸ್ವಲ್ಪ ದೊಡ್ಡದಿರುತ್ತವೆ. ಕೋಡುಗಳು ಅಗಲ, ನೇರ...

ಅಳಿಸುವವರೇ ನಗುವಾಗ ನೀನೇಕೆ ಅಳುವೇ

                          ನೀನು ಆಳಬೇಕೆಂದು ಆಂದಿರುವ ಮಾತುಗಳನ್ನು ಕೇಳಿಸಿ ನೀನು ಅತ್ತರೆ ಅವರಿಗೆ ನಾವು ಇನ್ನಷ್ಟು ಕೀಳಾಗಿ ಕಾಣುತ್ತೇವೆ ಅದರ ಬದಲಾಗಿ ನೀನು ಅವರ ಮಾತುಗಳನ್ನು ಕೇಳಿಸಿಕೊಂಡು ತಲೆಕೆಡಿಸಿಕೊಳ್ಳದೆ ನಿನ್ನ ಬಗ್ಗೆ ನಿನಗೆ ಗೊತ್ತಿದ್ದರೆ ಸಾಕು ಎಂದು ಮುಂದೆ ಸಾಗಿದರೆ ಯಾವ ಬೇಸರವೂ ನಮ್ಮ ಜೀವನದಲ್ಲಿ ಇರುವುದಿಲ್ಲ                      ನಮ್ಮ ಜೀವನದಲ್ಲಿ ಅಲಿಸುವವರೂ ತುಂಬಾ ಜನ ಇರುತ್ತಾರೆ ನಮ್ಮ ಹೆಜ್ಜೆ ಹೆಜ್ಜೆ ಎಲ್ಲೂ ಅಂತವರು ಒಬ್ಬರಾದರು ಸಿಗುತ್ತಾರೆ ಆದರೆ ನಾವು ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಜೀವನ ಹೇಗಿದೆ ಎಂದು ನಮಗೆ ಗೊತ್ತಿದ್ದರೆ ಸಾಕು ನಾವು ಬೇರೆಯವರ ಮುಂದೆ ತಲೆ ಬಗ್ಗಿಡುವ ಅವಶ್ಯಕತೆ ಇಲ್ಲ ನಾವು ಅವರ ಮುಂದೆ ತಲೆ ಬಗ್ಗಿಸಿ ಅಳುತ್ತಾ ನಿಂತರೆ ಅವರು ನಮ್ಮನ್ನು ಅವರ ಚುಚ್ಚು ಮಾತುಗಳಿಂದ ಇನ್ನಷ್ಟು ಅಳಿಸುವರು ಅದೇ ನಾವು ಅವರಿಗೆ ತಲೆ ಎತ್ತ್ತಿ ನಾನೇಕೆ ನಿಮ್ಮ ಮಾತು ಕೇಳಿ ಅಳಬೇಕು ಎಂದು ಅವರಿಗೆ ಎದುರು ಉತ್ತರ ಕೊಟ್ಟರೆ ಅವರು ನಮ್ಮನ್ನು  ಮತ್ತೆ ಅಳಿಸಲು ಪ್ರಯತ್ನಿಸುವುದಿಲ್ಲ ನಾವು ತಪ್ಪು ಮಾಡಿದಾಗ ನಮ್ಮನ್ನು ತಿದ್ದಿ ಬುದ್ಧಿ ಹೇಳಲು ನಮ್ಮ ಹೆತ್ತ ತಂದೆ ತಾಯಿ ಮತ್ತು ನಮ್ಮ ಕುಟುಂಬದವರು ಇದ್ದಾರೆ ಇವರ ಒಂದು ಮಾರ್ಗದಲ್ಲಿ ನಾ...
 ಕೆಟ್ಟ ಕಣ್ಣುಗಳು ಸ್ತ್ರೀ ಎಂಬ ಪದವು ಸಂಸ್ಕೃತ ಪದದಿಂದ ಬಂದಿದೆ.  ಹಿಂದಿನ ಕಾಲದಲ್ಲಿ ಸ್ತ್ರೀಯನ್ನು ದೇವರ ಸಮಾನವಾಗಿ ಕಾಣುತ್ತಿದ್ದರು.ಹೆಣ್ಣು ಎಂಬ  ಪದವೇ ಒಂದು ಅದ್ಭುತ. ಮಮತೆ ,ಕರುಣೆ, ವಾತ್ಸಲ್ಯ,ಅಕ್ಕರೆ ಹಾಗೂ ತಾಳ್ಮೆಯನ್ನು  ಹೊಂದಿರುವವಳೇ  ಹೆಣ್ಣು. ಒಂದು ಹೆಣ್ಣು 9 ತಿಂಗಳು  ತನ್ನ ಗರ್ಭದಲ್ಲಿ ಮಗುವನ್ನು ಸಾಕಿ ಸಲಹುತ್ತಾಳೆ. ಅದೇ ಮಗುವನ್ನು ಜನನ ನೀಡುವಾಗ  ಆ ತಾಯಿ ಬಹಳ ನೋವನ್ನು ಅನುಭವಿಸಿರುತ್ತಾಳೆ. ಒಬ್ಬ ಮನುಷ್ಯನು 4.7ಡೆಲ್ ಷ್ಟು ನೋವನ್ನು ತಡೆದುಕೊಳ್ಳುತ್ತಾನೆ.ಆದರೆ ತಾಯಿಯು ಮಗುವಿಗೆ ಜನ್ಮ ನೀಡುವಾಗ 5.7ಡೆಲ್ ಷ್ಟು ನೋವಾಗುತ್ತದೆ. ಆ ಕ್ಷಣವನ್ನು ಊಹಿಸಿಕೊಂಡರೆ ಮೈ ಜುಮ್ ವೆನಿಸುತ್ತದೆ. ಇಷ್ಟೆಲ್ಲಾ ನೋವನ್ನು ಸಹಿಸಿಕೊಳ್ಳುವ ಕರುಣಾಯಿಯೇ  ಹೆಣ್ಣು.ತಾಯಿಯ ಋಣವನ್ನು ಎಷ್ಟೇ ವಜ್ರ,ವೈಢೂರ್ಯ  ಹಣ ಕೊಟ್ಟರೂ ತೀರಿಸಲು ಸಾದ್ಯವಿಲ್ಲ .                         ಹೆಣ್ಣು ಒಲಿದರೆ ನಾರಿ ಮುನಿದರೆ  ಮಾರಿ ಎಂಬ ಗಾದೆ ಮಾತು ಇದೆ. ಭೂಮಿಯು ಒಂದು ಹೆಣ್ಣು, ಪ್ರಕೃತಿಯೂ ಒಂದು ಹೆಣ್ಣು. ಭೂಮಿಯಿಂದ  ಜನಿಸಿದ ಹೆಣ್ಣೆಂದರೆ ಅದು ಸೀತಾ ಮಾತೆ ಹಾಗೂ  ಅಗ್ನಿಯಲ್ಲಿ ಜನಿಸಿದ ಹೆಣ್ಣೆಂದರೆ ಅವಳೇ ದ್ರೌಪದಿ. ಇವರನ್ನೆಲ್ಲಾ ಜನರು ದೇವರ ಸಮಾನವಾಗಿ ಕಂಡರು. ಆದರೆ ಈಗಿನ ಕಾಲದಲ್ಲಿ ದೇವರ ಸ...