ಪೋಸ್ಟ್‌ಗಳು

ಮಡಿ

     ಸೃಷ್ಟಿಯಲ್ಲಿ ಭಗವಂತನು ಎಲ್ಲರಿಗೂ ಸಮಾನತೆಯನ್ನು ನೀಡಿರುವನು. ಉಸಿರಾಡುವ ಗಾಳಿ ,ಜಲ, ಗಿಡಮರಗಳು ಬೆಳಕು ಪ್ರಕೃತಿ ಇವೆಲ್ಲವುಗಳ ಮೇಲೆ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರಕೃತಿಯು ಇಷ್ಟೆಲ್ಲಾ ಸಮಾನತೆಯನ್ನು ನೀಡಿದರು ಮನುಷ್ಯನಾದವನು ಮಾತ್ರ ತನ್ನ ಜಾತಿ ಧರ್ಮ ಮತಗಳ ಅಂಧಕಾರದ ಸುಳಿಯಲ್ಲಿ ಸಿಲುಕಿರುವುದು ದುರಂತವೆ ಸರಿ.        ಅದು ಹೊಸಪೇಟೆ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲೂ ಉನ್ನತವಾದ ಹಂತದಲ್ಲಿದ್ದ ಒಂದು ವರ್ಗದ ದೀಕ್ಷಾ ಕಾರ್ಯಕ್ರಮವಿತ್ತು. ನಾನು ಹಾಗೂ ನನ್ನ ಮೂರು ಜನ ಸ್ನೇಹಿತರು ಆ ಕಾರ್ಯಕ್ರಮಕ್ಕೆ ಹೋಗಿದ್ದೆವು  ಅತಿಥಿಗಳಗಿ ಅಲ್ಲಾ ,ಕ್ಯಾಟರಿಂಗ್ ಕೆಲಸಕ್ಕಾಗಿ.   ಸಾಮಾನ್ಯವಾಗಿ ಊಟ ಎಂದರೆ ಹಸಿದಾಗ ಹೊಟ್ಟೆ ತುಂಬಿಸುವುದಾಗಿದೆ ಅಲ್ಲವೇ? ಆದರೆ ಅಲ್ಲಿ ನಾವು ಬಡಿಸುವ ಊಟಕ್ಕೂ ಮಡಿ ಊಟ ಹಾಗೂ ಹೊರಗಿನ ಊಟ ಎಂಬೆರಡು ವಿಧಗಳು ಇದ್ದವು. ಮನುಷ್ಯರು ತಮ್ಮನ್ನು ಜಾತಿ ಮತ-ಧರ್ಮಗಳ ಆಧಾರದಲ್ಲಿ ವಿಂಗಡಣೆ   ಮಾಡಿಕೊಂಡಿದ್ದಲ್ಲದೆ ಕುಡಿಯುವ ನೀರು, ತಿನ್ನುವ ಅನ್ನಕ್ಕೂ ಜಾತಿ ಭೇದ ಮಾಡುತ್ತಿರುವರು.ಎಂತಹ ದುರಂತ.                ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳು ಹೊಟ್ಟೆ ತುಂಬಾ ಊಟ ಮಾಡಿದರು. ಭಾರತೀಯ ಪರಂಪರೆಯಲ್ಲಿ ಮದುವೆ,ಮುಂಜಿ,ದೀಕ್ಷಾ ಕಾರ್ಯಕ್ರಮ ಯಾವುದೇ ಇರಲಿ ಊಟ ಹಾಕಿಸುವುದು ಸರ್ವಶ್ರೇಷ್ಠ ಕಾರ್ಯವಾಗಿದೆ. ಆದರೆ ಇಂದು ಅದು ಪ್ರತಿಷ್ಠೆಯಾಗಿ ಬದಲಾಗಿದೆ.                             ಅತಿಥಿಗಳೆಲ್ಲರನ್ನು ಬೀಳ್ಕೊಟ

ಎಂದೆಂದಿಗೂ ಅಳಿಯದ ಅಪ್ಪಟ ಕ್ರಾಂತಿಕಾರಿ....

ಜನವರಿ 23 ಭಾರತೀಯರು ಪಾಲಿಗೆ ಯಾವತ್ತೂ ಮರೆಯಲಾಗದ ದಿನವಾಗಿದೆ. ಒಂದು ಸ್ವತಂತ್ರ ಸೇನೆಯನ್ನು ಕಟ್ಟಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತು ಭಾರತದ ಭೂಭಾಗದಲ್ಲಿ ಬ್ರಿಟಿಷರನ್ನು ಸೋಲಿಸಿ ಸ್ವತಂತ್ರ ಭಾರತದ ಧ್ವಜ ಹಾರಿಸಿ ಭಾರತೀಯರ ಎದೆಯಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ನಾಯಕರಾದ ಸುಭಾಷ್  ಚಂದ್ರಬೋಸರ ಹುಟ್ಟಿದ ದಿನವಾಗಿದೆ. ಜಡಗಟ್ಟಿದ  ಭಾರತೀಯರ ಮನಸ್ಸುಗಳಿಗೆ ಹೊಸ ಉತ್ಸಾಹವನ್ನು ತುಂಬಿ ಭಾರತಕ್ಕಾಗಿ ಹೊರದೇಶಗಳಲ್ಲಿ ಮಿಡಿಯುವ ಹೃದಯಗಳನ್ನು ಸಂಪಾದಿಸಿದ ಮಹಾನ್ ನಾಯಕರು ಇವರು.. ಜೈ ಹಿಂದ್.. ಎನ್ನುವ ವಿರಘೋಷದ ಮೂಲಕ ಬ್ರಿಟಿಷರ ಎದೆನಡುಗಿಸಿದವರು ಇವರು. ಈ ಘೋಷ ವಾಕ್ಯವು ಹುಟ್ಟಿದ್ದು 1907 ರಲ್ಲಿ. ಇದರ ಕರ್ತೃ ನಮ್ಮ ದಕ್ಷಿಣದ "ಶಣ್ಬಾಗ್ ರಾಮನ್ ಪಿಳ್ಳೆ". ಅವತ್ತು ಜೈ ಹಿಂದ್ ಘೋಷವನ್ನು ಸುಭಾಷರಿಗೆ ಪರಿಚಯಿಸಿದ್ದು ಸ್ವಾತಂತ್ರ್ಯ ಹೋರಾಟಗಾರರಾದ 'ಜೈನಲುದ್ದೀನ್'. ಜನವರಿ 23 1897 ರಲ್ಲಿ ಇವತ್ತಿನ ಒರಿಸ್ಸಾದ ಕಟಕ್ನಲ್ಲಿದ್ದ ಬಂಗಾಳಿ ಕುಟುಂಬದ ಪ್ರಭಾವತಿ ದತ್ತ ಬೋಸ್ ಹಾಗೂ ಜಾನಕಿ ನಾಥ್ ಬೋಸರ ಹದಿನಾಲ್ಕು ಮಕ್ಕಳ ಪೈಕಿಯಲ್ಲಿ ಒಂಬತ್ತನೇಯವರಾದ ಸುಭಾಷ್ ಚಂದ್ರ ಬೋಸ್. ಇವರ ತಂದೆ ಬಂಗಾಳ ಪ್ರಾಂತ್ಯದ ಪ್ರಸಿದ್ಧ ವಕೀಲರಾಗಿದ್ದರಿಂದ  ಇವರಿಗೆ ಶಿಕ್ಷಣವನ್ನು ಪಡೆಯುವಲ್ಲಿ ಯಾವುದೇ ರೀತಿಯ ತೊಂದರೆಯು ಉಂಟಾಗಲಿಲ್ಲ.. 1918 ರ ವೇಳೆಗೆ ಇವರು ಕೊಲ್ಕತ್ತಾ ವಿಶ್ವವಿದ್ಯಾಲಯದ ಸ್ಕಾಟಸ್ಟ್ ಚರ್ಚ್ ಕಾಲೇಜಿನಿಂದ ಬಿ

ಪರಿಸರದ ಮೇಲೆ ಮಾನವನ ದೌರ್ಜನ್ಯ

ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಪರಿಸರವಿಲ್ಲದೆ ನಮ್ಮ ಅಸ್ತಿತ್ವಕ್ಕೆ ಯಾವುದೇ ಬೆಲೆಯಿಲ್ಲ. ಇಂದೂ ಕೂಡ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಅರಿಯುವ ಅಗತ್ಯವಿದೆ.              ಸುತ್ತಮುತ್ತಲೂ ವೈವಿಧ್ಯಮಯವಾದ ನಿಸರ್ಗದ ಸೊಬಗಿದೆ. ಹಲವಾರು ಗಿಡ ಮರಗಳಿವೆ. ವಿವಿಧ ಪ್ರಕಾರದ ಪ್ರಾಣಿ ಪಕ್ಷಿಗಳಿಗೆ. ಅನೇಕ ಸೂಕ್ಷ್ಮಜೀವಿಗಳಿವೆ. ಗುಡ್ಡ,ಬೆಟ್ಟ, ದೊಡ್ಡ ದೊಡ್ಡ ಪರ್ವತ ಶಿಖರಗಳು ಇದೆ. ಆದರೆ ವಿಜ್ಞಾನ,ತಂತ್ರಜ್ಞಾನ, ಅಭಿವೃದ್ಧಿ, ಆಧುನಿಕತೆ, ನಗರೀಕರಣ, ಕೈಗಾರೀಕರಣ ಎಂಬ ಹಲವು ಕಾರಣಗಳಿಗಾಗಿ ಅನೇಕ ರೀತಿಯಲ್ಲಿ ಅರಿತೋ ಅರಿಯದೆಯೋ ಪರಿಸರಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿದ್ದೇವೆ.                  ಇತ್ತೀಚೆಗಂತೂ ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ, ವಾಹನಗಳಿಗಾಗಿ ರಚನೆಯಾಗುತ್ತಿರುವ ರಸ್ತೆಗಳು,ದೊಡ್ಡ ದೊಡ್ಡ ಕಟ್ಟಡಗಳಿಗಾಗಿ ನಿರಂತರವಾಗಿ ಕಡಿಯುತ್ತಿರುವ ಮರಗಳು,ಇತ್ಯಾದಿಗಳಿಂದ ಮಾಲಿನ್ಯಗಳು ಹೆಚ್ಚಾಗುತ್ತಿದ್ದು ಹವಾಮಾನ ವೈಪರಿತ್ಯ ಉಂಟಾಗುತ್ತಿದೆ. ಅಲ್ಲದೆ ಹೆಚ್ಚುತ್ತಿರುವ ಜನಸಂಖ್ಯೆ, ಹೊಗೆ ಬರುವ ವಾಹನ, ವಾಹನಗಳ ಸಂದಣಿ, ಪ್ಲಾಸ್ಟಿಕ್ ಇತ್ಯಾದಿಗಳಿಂದ ನಮ್ಮ ಪರಿಸರ ಹಾಳಾಗುತ್ತಿದೆ.                      ನಾವು ನಮ್ಮ ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ. ಇದರಿಂದಾಗಿ ಹಸಿರು ಎಂಬುದು

ನನ್ನ ಕನಸಿನ ಭಾರತದ ಹಳ್ಳಿಗಳು

"ಹಳ್ಳಿಗಳು ಪಟ್ಟಣಿಗರ ಅನ್ನ ನೀಡುವ ಬಟ್ಟಲು "ಎಂಬ ಮಾತಿದೆ. ಭಾರತದ ಅಭಿವೃದ್ಧಿಯ ತಳಪಾಯವೇ ಹಳ್ಳಿಗಳು. ಪ್ರಾಚೀನ ಕಾಲದಿಂದ ತನ್ನ ಸಂಸ್ಕೃತಿ,  ಸಂಪ್ರದಾಯ, ಆಚಾರ ವಿಚಾರ ಪಾರಂಪರಿಕ ವೈದ್ಯ ಪದ್ಧತಿ ಹಾಗೂ ವಿಶಿಷ್ಟ ಜೀವನಶೈಲಿಯಲ್ಲಿ ಜೀವಂತಿಕೆಯನ್ನು ಉಳಿಸಿಕೊಂಡು ಬಂದಂತಹ ಅಪಾರ ವಿಶೇಷತೆ ನಮ್ಮ ಹಳ್ಳಿಗಳದ್ದು.ಹಳ್ಳಿಗಳಲ್ಲಿ ಕಾಣುವ ಸಂಸ್ಕಾರ, ನೈತಿಕತೆಯ ಮೌಲ್ಯಗಳು, ಆಚರಣೆಗಳು,ಹಳ್ಳಿ ಮಣ್ಣಿನ ಮೇಲೆ ಅಲ್ಲಿನ ಜನರಿಗಿರುವ  ಅಕ್ಕರೆ ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಅನ್ನ ನೀಡುವ ಭೂಮಿಯನ್ನು ಸಾಕ್ಷಾತ್ ದೈವವೆಂದು ಪೂಜಿಸುವ ಮನಸು ನಮ್ಮ ಹಳ್ಳಿಗರದ್ದು. ಇಲ್ಲಿನ ಅನೇಕ ಜಾನಪದ ಸಾಂಪ್ರದಾಯಿಕ ಶೈಲಿಗಳು ವಿದೇಶದಲ್ಲಿಯು ಮನ್ನಣೆ ಪಡೆದಿದೆ.               ಭಾರತದ ಹಳ್ಳಿಗಳಲ್ಲಿರುವ ಅತ್ಯದ್ಭುತ ವಿಶೇಷತೆಗಳು ಇರಲು ಸಾಧ್ಯವಿಲ್ಲ. ಆಧುನಿಕರಣದತ್ತ ಮುಖ ಮಾಡುತ್ತಿರುವ ನಮ್ಮ ಸಮಾಜದ ಮನಸ್ಸಿನಲ್ಲಿ ಹಳ್ಳಿಗಳೆಂದರೆ ವಿಚಿತ್ರ ತಾತ್ಸಾರ ಮನೋಭಾವ ಎದ್ದು ಕಾಣುತ್ತಿದೆ. ಹಳ್ಳಿಗಳೆಂದರೆ ಕೇವಲ ಅನಾಗರಿಕರ ತಾಣವೆಂದು ಮೂಗು ಮುರಿಯುವರು ಸಹ ಇದ್ದಾರೆ. ಹಳ್ಳಿಗಳಲ್ಲಿನ ಭೂಮಿಗಳನ್ನು ಕೈಗಾರಿಕೆಗೆ ಬಳಸಿಕೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ನಿಲುವನ್ನು ವಾದಿಸುವವರು ಸಹ ಇದ್ದಾರೆ. ಆದರೆ ದೇಶ ಅಭಿವೃದ್ಧಿ ಹೊಂದಬೇಕೆಂದರೆ ಹಳ್ಳಿಗಳ ಅಭಿವೃದ್ಧಿಯಿಂದ ಸಾಧ್ಯವೇ ಹೊರತು ಕೈಗಾರಿಕೆಗಳಿಂದ ಪರಿವರ್ತನೆ ಹೊಂದಿ ನಶಿಸಿ ಹೋದ ಹಳ್ಳಿಗಳ ಹೆಸರಿನಿಂದಲ್

ಬೆಳಕು

ಬೆಳಕು ಏನಿದು ಬೆಳಕು? ಎಲ್ಲಿದೆ ಬೆಳಕು? ಹೇಗಿರುತ್ತದೆ ಬೆಳಕು? ಈ ಬೆಳಕಿನ ಬಗ್ಗೆ ಪ್ರಶ್ನೆಗಳು ನನಗೆ ಆಗಾಗ ಹುಟ್ಟುತ್ತಿರುತ್ತವೆ.   ಬೆಳಕಿನ ಬಗೆಗೆ ನನ್ನ ಮನದಲ್ಲಿ ಪ್ರಶ್ನೆಗಳುಮೂಡಿದಾಗಲೆಲ್ಲ ನನ್ನಲ್ಲಿಯೇ ನಾನು ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.  ನನ್ನ ಪ್ರಕಾರ ಬೆಳಕು ಎಂಬುವುದು ಪ್ರತಿಯೊಬ್ಬರಿಗೂ ಬೇರೆ ಬೇರೆ ರೂಪದಲ್ಲಿ ತೋರುತ್ತದೆ.  ಬೆಳಕು ಒಂದು ಶಾಂತಿಯ ಸಂಕೇತ,  ಬೆಳಕು ಒಂದು ಕ್ರಾಂತಿಯ ಸಂಕೇತ, ಅಭಿವೃದ್ಧಿ, ಯಶಸ್ಸು , ಹೊಸ ಹುಮ್ಮಸ್ಸುಗಳ ಸಮ್ಮಿಲನ.    ನಾವುಗಳು  ಜಗತ್ತಿನ ಪ್ರತಿಯೊಂದು ವಸ್ತು ವಿಷಯಗಳನ್ನು ನಮ್ಮ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಹೊಲಿಸುತ್ತೇವೆ , ಹಾಗೆಯೇ ಬೆಳಕು ಕೂಡ..!    ಈಗ ಬೆಳಕು , ಇದನ್ನೇ ತೆಗೆದುಕೊಂಡರೆ ಇದನ್ನು ಹಲವಾರು ಜನರು ಹಲವು ದೃಷ್ಟಿಕೋನಗಳಿಂದ ನೋಡುವರು .  ಬಡವರಿಗೆ ಕಷ್ಟ ಕಾಲದಲ್ಲಿ ನಿಧಿ ಸಿಕ್ಕಾಗ ಆಗುವ ಆನಂದದಲ್ಲಿ , ರೈತನಿಗೆ ಬರಗಾಲದಲ್ಲಿ  ಮಳೆ ಬಂದಾಗ ವ್ಯಕ್ತ ಪಡಿಸುವ ಸಂತೋಷದಲ್ಲಿ , ಒಬ್ಬ ಅಂದನಿಗೆ ದೃಷ್ಟಿ ಬಂದು , ಅವನು ತನ್ನ ತಂದೆ ತಾಯಿಯರನ್ನು ನೋಡಿದ ಮೊದಲ ನೋಟದಲ್ಲಿ, ನಿರಂತರ ಪರಿಶ್ರಮದ ಫಲದಲ್ಲಿ ನಾವು ಬೆಳಕಿನ ಅನುಭವ ಕಾಣಬಹುದು. ಇದನ್ನು  ಕೆಲವರು ಬಹಿರಂಗದಲ್ಲಿಅನಭವಿಸಿದರೆ ,ಕೆಲವರು ಅಂತರಂಗಗಳಲ್ಲಿ ಅನುಭವಿಸುವರು.  ಕನ್ನಡದ ಷೇಕ್ಸ್ ಪಿಯರ್ ಕುವೆಂಪುರವರ ಗದ್ಯ ಹಾಗೂ ಕಾವ್ಯಗಳಲ್ಲಿ ,  ಬೇಂದ್ರೆ ಅವರ ಪದ್ಯಗಳಲ್ಲಿ , ಡಿವಿಜಿ ಅವರ  ಕಗ್ಗಗಳಲ್ಲ
 "ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಬೇಡಿ ಹುಚ್ಚಪ್ಪಗಳಿರಾ" ಎಂಬ ಪುರಂದರದಾಸರ ಮಾತು ಸತ್ಯವಾಗಿಯೂ ಪ್ರಸ್ತುತವಾದದ್ದು. ಅದೆಷ್ಟೊ  ಸಾವಿರ ವರ್ಷಗಳಿಂದ ಮನುಷ್ಯತ್ವಕ್ಕೆ ಒಂದು ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾ ಬಂದಿರುವ ಸಂಸ್ಕೃತಿ ನಮ್ಮದು. ಮನುಷ್ಯತ್ವ ಕೇವಲ ಕರುಣೆಯೋ ಕಾಳಜಿಯೋ ಖಂಡಿತವಾಗಿ ಅಲ್ಲ ಬಹುಶಃ  ಮನುಷ್ಯತ್ವ ಎಂಬ ಪದಕ್ಕೆ ನಿರ್ದಿಷ್ಟ ಅರ್ಥ  ಕಲ್ಪಿಸಲು ಸಾಧ್ಯವಿಲ್ಲ. ಮನುಷ್ಯತ್ವ ನಮ್ಮ ಒಳಮನಸ್ಸಿನ ಸದ್ಭಾವನೆ.                  ಮನುಷ್ಯತ್ವದಿಂದ ಒಬ್ಬ ಮನುಷ್ಯನ ಬದುಕಿಗೆ ಬೆಲೆ ನಾವು ತಿಳಿಯಬಹುದೇ ಹೊರತು ಮನುಷ್ಯತ್ವಕ್ಕೆ ಬೆಲೆ ಕಟ್ಟಲು ಎಂದಿಗೂ ಆಗದು. ಇನ್ನೊಬ್ಬರ ಭಾವನೆಗಳಿಗೆ,  ಕಷ್ಟಗಳಿಗೆ, ಸ್ಪಂದಿಸುವ ಮನಸ್ಸು ನಮ್ಮದಾಗಿದ್ದರೆ ಖಂಡಿತವಾಗಿಯೂ ನಮ್ಮಲ್ಲಿನ 'ಮನುಷ್ಯತ್ವ' ಜೀವನದ ಪ್ರತಿ ಸಂದರ್ಭದಲ್ಲೂ ನಮ್ಮನ್ನು ಎಚ್ಚರಿಸುತ್ತ ಬರುತ್ತದೆ.  ಬದಲಾಗುತ್ತಿರುವ ಕಾಲಮಾನದಲ್ಲಿ ಮನುಷ್ಯತ್ವ  ಎಂಬುದು ಗಾಳಿಗೆ ತೂರಿರುವ ತರಗೆಲೆಯಾಗಿರುವುದು  ಖಂಡಿತವಾಗಿ ವಿಷಾದನೀಯ. ಎಲ್ಲೋ  ರಸ್ತೆಯಲ್ಲಿ ಅಪಘಾತ ವಾದದ್ದು ಕಂಡರೆ ನಮಗೇತಕೆ  ಉಸಾಬರಿ? ಎಂದು ಅಲ್ಲಿಂದ ಜಾಗ ಖಾಲಿ ಮಾಡಲು ನೋಡುವ ಮಂದಿ ಒಂದುಕಡೆಯಾದರೆ ಇಂತಹ ಸನ್ನಿವೇಶ ಕಂಡರೆ ಸಾಕು ತಮ್ಮ ಕಿಸೆಯೊಳಗೆ ಕೈ ತುರುಕಿ  ಮೊಬೈಲಿನಲ್ಲಿ ಆ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕಲು ತವಕಿಸುವ ಮಂದಿ ಇನ್ನೊಂದು ಕಡೆ. ಇದು ಮನುಷ್ಯತ್ವಕ್ಕೆ ಸ
 ಮಳೆನಾಡು ನಮ್ಮೂರು ಪರವೂರಿನಲ್ಲಿ ನಮ್ಮೂರಿನ ಹೆಸರು.ಭಾಷೆ ಕೇಳಿದ ಕೂಡಲೇ ಕಿವಿ ಒಮ್ಮೆ ನೆಟ್ಟಗೆ ಆಗುವುದು. ಎಲ್ಲರಿಗೂ ಅವರ ಊರು , ಭಾಷೆ ಮೇಲೆ ಅಷ್ಟೊಂದು ಅಭಿಮಾನ ಇರುತ್ತದೆ. ಮಲೆನಾಡು ಅಂತ ಗುರುತಿಸಲ್ಪಡುವ ನಮ್ಮೂರು ಶಿವಮೊಗ್ಗ. ಮಲೆನಾಡಿನ ಸೊಬಗು ಆ  ಪ್ರಕೃತಿ ಸೌಂದರ್ಯ ಹಚ್ಚ ಹಸಿರಾದ ಕಾಡು, ಸುತ್ತಲೂ ಅಡಿಕೆ ತೋಟಗಳು,  ಭತ್ತದ ಗದ್ದೆಗಳು. ತಂಪಾದ ವಾತಾವರಣ, ಹೆಚ್ಚಿನ ಕಾಡು ಇವು ಇಲ್ಲಿನ ವಿಶೇಷತೆಗಳು. ಕಾಡು ಹೆಚ್ಚು ಇರುವುದರಿಂದ ಮಳೆಯು ಪ್ರಮಾಣ ಹೆಚ್ಚಾಗಿರುತ್ತದೆ . ಮಲೆನಾಡನ್ನು ಮಳೆ ನಾಡು ಅಂತ ಕರೆದವರೂ ಇದ್ದಾರೆ.  ನಮ್ಮೂರಿನಲ್ಲಿ ಮಳೆ ಹೆಚ್ಚು ಬೇಸಿಗೆಯಲ್ಲೂ ಹಿತಕರ ಎನ್ನಿಸುವ ವಾತಾವರಣವೇ ಇರುತ್ತದೆ. ಇನ್ನು ಚಳಿಗಾಲದಲ್ಲಿ  ನಡುಗುವಂತೆ ಅಧಿಕವಾದ ಚಳಿ ಇರುತ್ತದೆ.ಹಾಗೆಯೇ ಇಬ್ಬನಿಯೂ ಹೆಚ್ಚಿರುತ್ತದೆ. ಬೆಳ್ಳಿಗೆ ಹತ್ತು ಗಂಟೆಯವರೆಗೂ ವಾತಾವರಣ ಇಬ್ಬನಿ ಮುತ್ತು  ಪೋಣಿಸಿದಂತೆ ಇರುವುದನ್ನು ನೋಡುವುದೇ ಒಂದು ಹಬ್ಬ. ಹಕ್ಕಿಗಳ ಚಿಲಿಪಿಲಿ, ನಲಿವಿನ  ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಮಾತೇ ಹಸಿರನ್ನುಟು ಕಂಗೊಳಿಸುತ್ತಿದ್ದಾಳೆ ಇಲ್ಲಿ.  ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ.  ಸಾಯೋ ತನಕ ಸಂಸಾರದಲ್ಲಿ  ಗಂಡಾಗುಂಡಿ. ಹೇರಿಕೊಂಡು ಹೋಗೋದಿಲ್ಲ ಸುತ್ತಾಗ ಬಂಡಿ. ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.  ಎಂಬ ಸುಂದರವಾದ ಸಾಲುಗಳನ್ನು ಹೊಂದಿದ್ದು ಹಾಗೆಯೇ ಮುಂದುವರೆದರಯುವ ಸಾಹಿತ್ಯ ರಚಿಸಿದ್ದು ಮೂಗೂರು ಮಲ್ಲಪ್ಪ

ಶಿಕ್ಷಣದ ಮಹತ್ವ

ಶಿಕ್ಷಣದ ಮಹತ್ವ: ಈದೇಶದಲ್ಲಿ ಎಲ್ಲ ವೂ ಚುನಾವಣೆ  ಅಧಾಂತವಾಗಿ ಚುನಾವಣೆ ಗೆಲ್ಲುವುದೇ ಎಲ್ಲಾ ಚಟುವಟಿಕೆಗಳ  ಅಡಿಪಾಯವಾಗಿರುವ ಸಂದರ್ಭದಲ್ಲಿ, ವಿದ್ಯಾವಂತರು ವೈಚಾರಿಕ ನಿಲುವಿನಿಂದ ಯೋಚಿಸದೆ ಜಾತಿ, ಧರ್ಮ, ಮತ, ಪಕ್ಷ, ಪಾತ್ರ, ಲಿಂಗ ಎಂಬ ಸ್ವಯಂ  ಸ್ಥರಗಳ ಮಧ್ಯ -ಸಿಲುಕಿಕೊಂಡು, ಪ್ರಜಾಪ್ರಭುತ್ವವನ್ನು ಚುನಾವಣೆ ಗಳಲ್ಲಿ ಮಾತ್ರ ಕಾಣಿಸುತ್ತಿರುವ ನಾಗರಿಕ ಸಮಾಜದ ಪರಿಸ್ಥಿತಿಯಲ್ಲಿ     ಡಾ.ಬಿ.ಅರ್. ಅಂಬೇಡ್ಕರರನ್ನು ನೆನಪಿಸಿಕೊಳ್ಳುವುದು  ಮತ್ತೂ ಅವರು ರಚಿಸಿದ ಸಂವಿಧಾನದ ಅರಿವಿನೊಂದಿಗೆ  ದೇಶದ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡು ಕೊಳ್ಳುವ ಪ್ರಯತ್ನ ಸದ್ಯದ    ಅತಿ ದೊಡ್ಡ ಸವಾಲು.ಈ ಸವಾಲು  ಎದುರಿಸಬೇಕಾದರೆ ಈ ದೇಶದ ಭಾವಿಪ್ರಜೆಗಳಾದ ಶಾಲಾ  ಕಾಲೇಜುಗಳ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಚಿಂತನೆಗಳನ್ನು  ಮೈಗೂಡಿಸಿಕೊಂಡು ಸಂವಿಧಾನದ ಡಿಯಲ್ಲಿ ಜೀವನ ಸಾಗಿಸುವ ಮತ್ತು ದೇಶವನ್ನು ಮುನ್ನಡೆಸುವ ತಿಳುವಳಿಕೆ ಶಕ್ತಿ ಸಾಮರ್ಥ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯ. ಡಾ.ಬಿ.ಆರ್.ಅಂಬೇಡ್ಕರವರು ದಾ ದರ್ಶನಿಕ ಭಾರತೀಯ ಸುಧಾರಕ, ಗುಲಾಮಗಿರಿಯನ್ನು ತೊಡೆದು ಹಾಕಲು  ಶಿಕ್ಷಣವೇ ಒಂದು  ಅಸ್ತ್ರವೆಂದು ನಂಬಿದ್ದರು. ಇದು  ಶೋಷಿತರಲ ಶೋಷಿತರ ಲ್ಲಿ  ಜಾಗೃತಿಯನ್ನು ಮೂಡಿಸಿ ಅವರ ಸಾಮಾಜಿಕ ಸ್ಥಿತಿ ಆರ್ಥಿಕ ಸುಧಾರಣೆ  ಅವರ ಸ್ಥಿತಿ, ಅರ್ಥಿಕ ಸುಧಾರಣೆ ಮತ್ತು ಅವರ ರಾಜಕೀಯ ಸ್ವಾತಂತ್ರ್ಯ ಪಡೆಯಬೇಕೆಂದು ಅವರ ಅಭಿಲಾಷೆ ಯಾಗಿತ್ತು. ಅಂಬೇ ಡ್ಕರ್ ರವರ

ಹೊಸ ಶಿಕ್ಷಣ ನೀತಿ

ಹೊಸ ಶಿಕ್ಷಣ ನೀತಿ                   ಮನುಷ್ಯ ತನ್ನ ಪೂರ್ಣ ಮಾನವ ಸಾಮಥ್ರ್ಯಗಳಿಸಿಕೊಳ್ಳಲು ಸಮಾನತೆಯಳ್ಳ ಮತ್ತು ನ್ಯಾಯಸಂಗತವಾದ ಸಮಾಜವೂಂದನ್ನು ಅಭಿವೃದ್ಧಿ ಪಡಿಸಲು ಹಾಗೂ ರಾಷ್ಟ್ರದ ಎಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ.  ಶಿಕ್ಷಣವು ಮನುಷ್ಯನ ಜೀವನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಬಾವ ಬೀರುತ್ತದೆ..ಆದರೆ ಇತ್ತೀಚಿಗೆ ದೇಶದಲ್ಲೇ ಕರ್ನಾಟಕವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP) ಜಾರಿಗೊಳಿಸಿರುವ ಮೊದಲ ರಾಜ್ಯಗಳಲ್ಲಿ ಒಂದಾಗಿದೆ...ಇದರ ಉದ್ದೇಶ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ನೀಡಬೇಕೆಂಬುದು. ಆದರೆ ಇದು ಅವ್ಯವಸ್ಥೆಯಿಂದ ಕೂಡಿದೆ ಹಾಗೂ ತುಂಬಾ ಗೊಂದಲ ವನ್ನು ಸೃಷ್ಟಿ ಮಾಡಿದೆ..    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲಿಗೆ ಅನುಷ್ಠಾನ ಗೊಳಿಸುತ್ತಿರುವುದಾಗಿ ರಾಜ್ಯ ಸರಕಾರ ಬೆನ್ನು ತಟ್ಟಿಕೂಳ್ಳುತ್ತಿರುವ ನಡುವೆಯೇ ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಭೋದಕ - ಭೋದಕೇತರ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಇಲ್ಲದೇ ಗೊಂದಲದಲ್ಲಿರುವುದು ಕಂಡು ಬರುತ್ತಿತ್ತು.. NEP ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳುತ್ತಿರುವ ಪ್ರಶ್ನೆಗಳಿಗೆ ಬಹುತೇಕ  ಎಲ್ಲ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಯಿಂದ ನಮಗೇ ಅರ್ಥವಾಗಿಲ್ಲ...ನಿಮಗೇನು ವಿವರಿಸೋಣ..?  ಎಂಬ ಮರುಪ್ರಶ್ನೆ ತೋರಿಬರುತ್ತವೆ. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನೂರೆಂಟು ಗೊಂದಲಗಳಿವೆ. ಕೊರೋನದಿಂದ ಎಲ್ಲವೂ ಅಸ್ತ
 *"ಮೇಘರಾಜನ ಜೊತೆಯಲ್ಲಿ ಮಲೆನಾಡಿನ ಮಳೆಗಾಲದ ಮೋಜನ್ನು ಮನರಂಜಿಸುವ ಬನ್ನಿ*"     ಆಹಾ! ಮಳೆಗಾಲ ಬಂತೆಂದರೆ ಸಾಕು ಅದು ಮೋಜು - ಮಸ್ತಿಯ ಮಹಾ ಮಜಲನ್ನು ಎಲ್ಲರೂ ಹೆಜ್ಜೆ ಹೆಜ್ಜೆಯಾಗಿ ಅನುಭವಿಸುವರು. ಒಬ್ಬೊಬ್ಬರಿಗೆ ಒಂದೊಂದರ ಮೇಲೆ ಆಸಕ್ತಿ,ಅಭಿರುಚಿ ನನಗಂತೂ ಹರಿಯುವ ಜಲಧಾರೆಯನ್ನು ವೀಕ್ಷಿಸುವುದೇ ಮಹದಾನಂದ.    ಅಶ್ವಿನಿ ಇಂದ ಶುರುವಾದ ಮಳೆಯ ಆರ್ಭಟ ಸಿಡಿಲ ಭರದಂತೆ ಮೋಡ ಕರಗಿ ಹನಿಯ ರೂಪದಿ ವಸುಂಧರೆ ಸೇರುವುದು. ಹನಿ ಹನಿ ಕೂಡಿ ಹಳ್ಳವಾಗಿ ಹಳ್ಳಕೊಳ್ಳಗಳು ಒಂದೆಡೆ ಸೇರಿ ನದಿಯಾಗಿ ಮಾರ್ಪಡುತ್ತದೆ. ಹರಿವ ನದಿಯಿಂದ ಧುಮುಕುವ ಆ ನೀರಿನ ರಭಸಕ್ಕೆ ಅಡಿಯಿಂದ ಮುಡಿವರೆಗೆ ಶುಭ್ರಶೋಭಿತೆಯಾಗಿ ಸ್ವಚ್ಚಂದದ ಸೆಲೆಯಾಗಿ ಗೋಚರಿಸುವುದು. ಈ ಪ್ರಾಕೃತಿಕ ಸೌಂದರ್ಯವನ್ನು ನಮ್ಮ  ಅಕ್ಷಿಕಮಲಗಳಿಗೆ ತೋರಿಸಿದೊಡೆ ಹಿಂತಿರುಗಲು ಸಮ್ಮತಿಯನ್ನು ಕೊಡಲಾರವು.ಅದೇ ಈ ಜಲಪಾತಗಳ ವೈಶಿಷ್ಟ್ಯ.            ಖಾದ್ಯ ಪ್ರಿಯರಿಗಂತೂ ಈ ಮಳೆಗಾಲದಲ್ಲಿ ಬಗೆಬಗೆಯಾದ ವಿಭಿನ್ನ ರೀತಿಯ ವಿಭಿನ್ನ ರೀತಿಯ ಸೊಪ್ಪು-ಸೆದೆಗಳುದೆಗಳು ಅದರಲ್ಲೂ ಅಣಬೆ, ಕಳಲೆಯಂತೂ ಬಹುಬೇಡಿಕೆಯ ವಸ್ತುಗಳಾಗಿವೆ. ಸೊಪ್ಪು ಪ್ರಿಯರಿಗೆ ಕೆಸುವಿನ ಎಲೆ,ತಟ್ಟೆ ಸೊಪ್ಪು, ಎಲೆ ದುರ್ಗೆ ಸೊಪ್ಪು, ಸಾಂಬಾರ್ ಸೊಪ್ಪು,ಹೊನ್ನಗನ್ನೇ  ಸೊಪ್ಪು, ಅಮಟೆಕಾಯಿ,ಬೃಂಗರಾಜ,ಇವೆಲ್ಲವನ್ನು ಸವಿದರೆ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಬಹುದು.           ಜಿಟಿ-ಜಿಟಿ ಮಳೆಯಲ್ಲಿ ನೆಂದು ಚಳಿಯಲ್ಲಿ ನಡುಗುವ ಜ