ಪೋಸ್ಟ್‌ಗಳು

ನಮ್ಮ ಮುಂಡಗೋಡ

ಇಮೇಜ್
    ಭಾರತದ ಕರ್ನಾಟಕ ರಾಜ್ಯದ. ಪ್ರವಾಸಿತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯ ಒಂದು ಪಟ್ಟಣ ವಾಗಿದೆ. ಮುಂಡಗೋಡ ಭತ್ತದ ವ್ಯಾಪಕ ಕೃಷಿಗೆ ಹೆಸರು ವಾಸಿಯಾಗಿದೆ.     ಪ್ರವಾಸಿಯ ತಾಣಗಳಿಗೆ ಹೆಸರು ವಾಸಿಯಾದ ಉತ್ತರ ಕನ್ನಡ ಜಿಲ್ಲೆಯಂತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಡಗೋಡ ಕೂಡ ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುತ್ತದೆ.   " ಮುಂಡಗೋಡ ಟಿಬೇಟಿಯನ್ ಕ್ಯಾಂಪ್ "   ಪ್ರಸಿದ್ಧಿಯಾಗಿರುವ ಟಿಬೇಟಿಯನ್ ಕ್ಯಾಂಪ್ ಭಾರತದಲ್ಲಿ ಬೇರೆಲ್ಲೂ ಕಾಣಸಿಗದ ವಿಶಿಷ್ಟ ವಾಸ್ತುಶಿಲ್ಪದ ಬೃಹತ ಕಟ್ಟಡ, ಒಟ್ಟು ಏಳು ಭೌದ್ಧ ವಿಹಾರ, ಬುದ್ಧನ ಪ್ರತಿಮೆ, ಟಿಬೇಟಿಯನ್ಸ ಪೇಟೆ, ಟಿಬೇಟಿಯನ ಚಿತ್ರಕಲೆ ನೋಡುಗರನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತೆ.      ಇವರು ತಮ್ಮ ಮೂಲ ದೇಶವಾದ " ಟಿಬೇಟ " ಮೇಲೆ ಚೀನಾ ದಾಳಿಯನ್ನು ಮಾಡಿದಾಗ ತಮ್ಮ ಜೀವ ಉಳಿಸಿಕೊಳ್ಳಲು ಬೇರೆ -ಬೇರೆ ದೇಶದಲ್ಲಿ ಆಶ್ರಯತಾಣವನ್ನು ಹುಡುಕಿಕೊಂಡು ಬಂದು 1959 ರಲ್ಲಿ ಅಲ್ಲಿಂದ ಹೋರಟು  ಭಾರತಕ್ಕೆ ಬಂದರು.   ಭಾರತದ ಐದು ಪ್ರದೇಶಗಳಲ್ಲಿ 1966 ರಿಂದಲೇ ನೆಲೆಗೊಂಡಿದ್ದಾರೆ.       ಬೇರೆ ನಾಲ್ಕು ಪ್ರದೇಶಗಳಿಗಿಂತ ಮುಂಡಗೋಡ ಟಿಬೇಟ ಜಾಸ್ತಿ ಮತ್ತು ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಕಾಣವಾಗಿದೆ.     ಮುಂಡಗೋಡ ತಾಲೂಕಿನ ಮತ್ತೊಂದು ಪ್ರವಾಸಿಗರ ತಾಣವೆಂದರೆ.      "ಅತ್ತಿವೇರಿ ಪಕ್ಷಿಧಾಮ " ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ

ಡಮಾಮಿ

ಇಮೇಜ್
      ಸಿದ್ದಿ ಜನಾಂಗದ ವೈಶಿಷ್ಟ್ಯ ಕಲಾ ಪ್ರಕಾರಗಳಲ್ಲಿ ಡಮಾಮಿ ನೃತ್ಯವು ಒಂದು. ಸಿದ್ದಿಗಳು ಶ್ರಮಜೀವಿಗಳು ಹಿಂದಿನ ಕಾಲದಲ್ಲಿ ದಿನವಿಡಿ ಗುಲಾಮರಾಗಿ ದುಡಿದು ದಣಿದ ಅವರು ಸಂಜೆ ಮನೋರಂಜನೆಗೆಂದು ಮತ್ತು ತಮ್ಮ ಹಿರಿಯರ ಕಾಲಾನಂತರದಲ್ಲಿ ಅವರ ಆರಾಧನೆಯ ದಿನದಂದು ಪ್ರಮುಖವಾಗಿ ಈ ನೃತ್ಯವನ್ನು ಮಾಡುತಿದ್ದರು.                      ಡಮಾಮಿ ಎಂಬುದು ಒಂದು ವಿಶಿಷ್ಟವಾದ ಚರ್ಮವಾದ್ಯ . ಇದನ್ನು ನುಡಿಸುತ್ತಾ ಮಹಿಳೆಯರು ಅಥವಾ ಪುರುಷರು ಇಲ್ಲವೇ ಇಬ್ಬರು ಸೇರಿ ಜೋಡಿಯಾಗಿ ಕುಣಿಯುತ್ತಾರೆ . ಹಾಡಿಗೆ ತಕ್ಕಂತೆ ಬಾರಿಸುತ್ತಾ  ವಿವಿಧ ಮಜಲುಗಳಲ್ಲಿ ಕುಣಿಯುವ ಕುಣಿತ ಇದಾಗಿದ್ದು ನೋಡುಗರಿಗೆ ರೋಮಾಂಚನಕಾರಿಯಾದ ನೃತ್ಯ.       ಸಿದ್ದಿಗಳು ಕಾಡುವಾಸಿಗಳಾಗಿದ್ದರಿಂದ ಇದರ ವೇಷ ಭೂಷಣಗಳು ಸಹಜವಾಗಿ ಕಾಡಿನಲ್ಲಿ ದೊರೆಯುವ ವಸ್ತುಗಳೇ ಆಗಿವೆ. ತಲೆಗೆ ನವಿಲುಗರಿಗಳನ್ನು ಕಟ್ಟಿಕೊಂಡು ಮುಖಕ್ಕೆ ಕಪ್ಪು ಬಿಳಿ ಬಣ್ಣ ಬಳಿದು ಕುತ್ತಿಗೆಗೆ ಸರಗಳು ಸೊಂಟಕ್ಕೆ ಮರದ ಎಲೆಗಳು ಮತ್ತು ಹಿಂದೆ ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳುತ್ತಿದ್ದರು.ಬದಲಾಗಿ ಈಗ ಚರ್ಮದ ಬಣ್ಣದ ನಕಲಿ ಬಟ್ಟೆಗಳನ್ನು ಸುತ್ತಿಕೊಂಡು, ಒಟ್ಟಾರೆಯಾಗಿ ಕಾಡಿನಲ್ಲೇ ಸಿಗುವ ವಸ್ತುಗಳಿಂದ ಅಲಂಕಾರ ಮಾಡಿಕೊಂಡು ನೃತ್ಯವನ್ನು ಮಾಡುತ್ತಿದ್ದರು.               ಈ ಒಂದು ಕಲೆ ಸಿದ್ದಿ ಜನಾಂಗಿಯರಲ್ಲಿ ಅವರ ಪೂರ್ವಜರಿಂದ ಬಹಳ ಹಿಂದಿನಿಂದ ತಲೆಮಾರುಗಳಿಂದ ತಲೆಮಾರುಗಳಿಗೆ ಬಂದಂತಹ ಕಲೆಯಾಗಿದ್ದು ಸಿದ್ದಿಗ
 ಈಗಿನ ಕಾಲದಲ್ಲಿ ಯಾರ ಕೈಯಲ್ಲಿಯೂ ಸಹ ಮೊಬೈಲ್ ಗಳು ಇಲ್ಲವೆಂದು ಹೇಳುವ ಹಾಗೆಯೇ ಇಲ್ಲ. ಪ್ರತಿಯೊಬ್ಬರ ಕೈಯಲ್ಲಿಯೂ ಸಾಮಾನ್ಯವಾಗಿ ಕ ಕಾಣಬಹುದಾದಂತ ಒಂದು ಸಾಧನವಾಗಿದೆ.ಮೊಬೈಲ್ ಗಳು ಇಲ್ಲದೆ ಹೋದರೆ ಬೆಳಗಿನ ಪ್ರಾರಂಭವೇ ಆಗುವುದಿಲ್ಲ ಎನ್ನುವ ಪರಿಸ್ಥಿತಿಯು ಸೃಷ್ಟಿಯಾಗಿದೆ.                                   ಮೊದಲು ಯಾರ ಹತ್ತಿರವೂ ಸಾಮಾನ್ಯವಾಗಿ ಮೊಬೈಲ್ ಫೋನ್ ಗಳು ಲಭ್ಯವಿರುತ್ತಿರಲಿಲ್ಲ. ಊರಿನಲ್ಲಿ ಒಂದು ಅಥವಾ ಎರಡು ಪೋನ್ ಗಳುಇದ್ದರೆ ಹೆಚ್ಚು. ಆ ಸಮಯದಲ್ಲಿ ಮಕ್ಕಳು ತಂದೆ- ತಾಯಿಗಳೊಡನೆ ಕಾಲ ಕಳೆಯಲು ಹೆಚ್ಚು ಇಷ್ಟಪಡುತ್ತಿದ್ದರು .ಅವರು ಶಾಲೆ, ಮನೆ ,ಆಟ ,ಪಾಠ ಇವುಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದ್ದರು. ಶಾಲಾ ದಿನಗಳಲ್ಲಿ ಶಾಲೆಯಲ್ಲಿ ತಮ್ಮ ಸಹಪಾಠಿಗಳೊಡನೆ ಆಟ, ಮನೋರಂಜನೆ ,ಗುಂಪು ಆಟಗಳು, ಎಲ್ಲರೂ ಒಟ್ಟಾಗಿ ಕುಳಿತುಕೊಂಡು ಊಟ ಮಾಡುವುದು. ಎಲ್ಲವೂ ಸೇರಿ ಒಂದು ದಿನ ಹೇಗೆ ಕಳಿಯಿತು ಎಂಬುದರ ಬಗೆಗೆ ಅರಿವೇ ಇಲ್ಲದ ರೀತಿಯಲ್ಲಿ ಶಾಲಾ ದಿನಗಳು ಮುಗಿದು ಹೋಗುತ್ತಿದ್ದವು.                                   ಶಾಲಾ ದಿನಗಳ ನಂತರ ಬರುತ್ತಿದ್ದಂತಹ ರಜ ದಿನಗಳು ಎಂದರೆ  ಮಕ್ಕಳಿಗೆ ಅತ್ಯಂತ ಪ್ರಿಯದಾಯಕವಾಗಿದ್ದವು. ಅಜ್ಜ- ಅಜ್ಜಿ ಮನೆಗೆ ಹೋಗುವುದೇ ಒಂದು ರೀತಿಯ ಮಜ. ಅಜ್ಜಿಯ ಮನೆಯ ಹೆಸರುಗದ್ದೆಯಲ್ಲಿ ಆಟವಾಡುವುದು, ಅಲ್ಲಿಯ ಗೆಳೆಯರೊಡನೆ ಊರೂರು ಸುತ್ತುವುದು, ಹೊಳೆಯಲ್ಲಿ ಈಜುವುದು, ಮೀನು ಹಿಡಿಯುವುದು ಇವೆಲ್ಲ ಎಷ್ಟು
 ನಾನು ಹುಟ್ಟಿ ಬೆಳೆದದ್ದು ಎಲ್ಲದೂ ಹಳ್ಳಿಯಲ್ಲಿ. ನಾವೇನು ಹೇಳುವಷ್ಟು ಶ್ರೀಮಂತರಲ್ಲ ಮಧ್ಯಮವರ್ಗದವರು. ನಮ್ಮದೇ ಆದ ಸ್ವಂತ ಸ್ವಲ್ಪ ತೋಟ ಹಾಗೂ ಗದ್ದೆಯನ್ನು ನನ್ನಪ್ಪ ಹೊಂದಿದ್ದರು.          ಸುಮಾರು ಏಳು ಎಂಟು ವರ್ಷಗಳ ಹಿಂದಿನ ಘಟನೆದು. ಆಗ ನಮ್ಮೂರಿನಲ್ಲಿ ಟ್ಯಾಕ್ಟರ್ ನಂತರ ಯಾವುದೇ ರೀತಿಯ ಉಪಕರಣಗಳಿರಲಿಲ್ಲ. ಎಲ್ಲರೂ ಎತ್ತಿನ ಸಹಾಯದಿಂದ ನೇಗಿಲನ್ನು ಬಳಸಿ ಉಳುಮೆಯನ್ನು ನಡೆಸುತ್ತಿದ್ದರು.ಆಗಿಲ್ಲ ನಮಗೆ ಮಳೆಗಾಲ ಶುರುವಾಗುವ ಜೂನ್ ತಿಂಗಳು ಎಂದರೆ ತುಂಬಾ ಅಚ್ಚು ಮೆಚ್ಚು.ಆ ವೇಳೆಗೆ ಮೊದಲ ಮಳೆ ಆಗುವಾಗ ನಮ್ಮೂರಿನಲ್ಲಿ ಕೋಳಿ ಹಬ್ಬ ಆಚರಿಸುವರು. ಇದೇ ವೇಳೆಗೆ ಗದ್ದೆ ಅಕ್ಕ-ಪಕ್ಕದಲ್ಲಿದ್ದ ಹಳ್ಳಗಳ ಮೀನು, ಎಡಿಗಳೆಲ್ಲವೂ ಗದ್ದೆಗೆ ಬರುತ್ತಿದ್ದವು.            ಆಗೆಲ್ಲ ಈಗಿನ ತರ ಕೊಡೆ ಅಥವಾ ರೇನ್ಕೋಟನ್ನು ಅಷ್ಟಾಗಿ ಬಳಸುತ್ತಿರಲಿಲ್ಲ. ಅದರ ಬದಲಾಗಿ ಪ್ಲಾಸ್ಟಿಕ್ ಕೋಳಿಗೆಯನ್ನು ಧರಿಸಿ ಮೀನನ್ನು ಹಿಡಿಯಲು ನಾವೆಲ್ಲ ಊರಿನ ಸಣ್ಣ ಮಕ್ಕಳು ಹೋಗುತ್ತಿದ್ದೆವು ಒಂದು ಬೆಳಗ್ಗೆ ತಿಂಡಿ ತಿಂದು ಎಲ್ಲರೂ ಒಟ್ಟಿಗೆ ಹೊರಟರೆ ಕತ್ತಲಾಗುವ ವೇಳೆಗೆ ಮನೆಗೆ ಮರಳುತ್ತಿದ್ದೆವು. ಮಳೆ ಚಳಿ ಹಸಿವು ಏನನ್ನು ಲೆಕ್ಕಿಸದೆ ಮೀನು ಹಿಡಿಯುವುದೆಂದರೆ ನಮಗಾಗ ಏನೋ ಸಾಧಿಸಿದ ಖುಷಿ. ಒಂದು ಬೆಳಗ್ಗೆ ಹೊಂಟರೆ ಕತ್ತಲಾಗುವಾಗ ಎಲ್ಲರೂ ಒಬ್ಬರ ಮನೆಗೆ ಎಲ್ಲರ ಮೀನನ್ನು ರಾಶಿ ಹಾಕಿ ಹಂಚಿಕೊಳ್ಳುತ್ತಿದ್ದೆವು.            ಬೆಳಗ್ಗೆಯಿಂದ ಅಲ್ಲಿಯವರೆಗೆ ಇರದ ಭಯವೋ ಇದರ

ಯುಗಾದಿ

ಇಮೇಜ್
 ಭಾರತವು ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ರಾಷ್ಟ್ರ . ಇಲ್ಲಿ ಹಬ್ಬ ಹರಿ ದಿನಗಳಿಗೆ ಕೊರತೆಯೇನಿಲ್ಲ. ಮನಸ್ಸುಗಳ ಭಾವಗಳನ್ನು ಬಂಧಿಸುವ ಸಂತಸ,ಸಡಗರದ ದಿನಗಳನ್ನು ನಾವಿಲ್ಲಿ ಕಾಣಬಹುದು. ಅಂತಹ ಹಬ್ಬಗಳಲ್ಲಿ ಒಂದು ಯುಗಾದಿ.                      ಯುಗಾದಿ ಹಿಂದೂ ಸಂಪ್ರದಾಯದಂತೆ ಹೊಸ ವರ್ಷದ ಆರಂಭಗೊಳ್ಳುವ ದಿನ. ಈ ಹಬ್ಬವನ್ನು ದೇಶದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭ ಮತ್ತು ಸುದ್ದಿಯ ಸಮಯವನ್ನು ಸಂಕೇತಿಸುತ್ತದೆ.                      ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಹಬ್ಬವು ಜನಪ್ರಿಯವಾಗಿದೆ. ಈ ಹಬ್ಬಕ್ಕೆ ಅದರದೇ ಆದ ಪೌರಾಣಿಕ ಹಿನ್ನೆಲೆಯೂ ಇದೆ. ಬ್ರಹ್ಮನು ಜಗತ್ತನ್ನು ಸೃಷ್ಟಿ ಮಾಡಿದ ದಿನವೆಂದು ಶ್ರೀರಾಮಚಂದ್ರನು ರಾವಣನ ಮೇಲೆ ಜಯ ಸಾಧಿಸಿದ ಕಷ್ಟದ ದಿನಗಳನ್ನೆಲ್ಲ ಕಳೆದು ಸೀತಾ ಮಾತೆ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಬಂದ ದಿನವೆಂದು ಹಾಗೂ ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕೊಂಡೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ತ್ಯಾವತಾರದಲ್ಲಿ ಹೋಗಿ ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು, ಅನಂತರ ಬ್ರಹ್ಮನು ಸೃಷ್ಟಿಕಾರ್ಯ ಆರಂಭ ಮಾಡಿದನೆಂದು ಪುರಾಣದ ಐತಿಹ್ಯ ಇದೆ. ಇಂಥ ಹಲವು ಶುಭಾರಂಭಗಳಿಂದ ಯುಗಾದಿ ಆಚರಣೆ ಬಂದಿದೆ.                        ಹಬ್ಬದ ಮುನ್ನ ದಿನದಂದು ಮನೆ

"ಅಣ್ಣ ತಂಗಿಯ. ಸಂಬಂಧ ಎಂದರೇ ಒಂದೇ ಜೀವ ಎರಡು ದೇಹಗಳಿದಂತ್ತೆ

        ವಿವಿದೆತೆಲ್ಲಿ ಏಕತೆಯನ್ನು  ಹೊಂದಿರುವ  ದೇಶವೆಂದರೆ ಅದು ನಮ್ಮ ಭಾರತ. ಭಾರತದಲ್ಲಿ ಅಣ್ಣ -ತಂಗಿಯ ಸಂಬಂಧವನ್ನು ಬಿಗಿಯಾಗಿಸಲು   ರಕ್ಷಾ  ಬಂಧವನ್ನು  ಆಚರಿಸುತ್ತಾರೆ.ರಕ್ಷಾ ಬಂಧನ    ಎಂಬ  ಹಬ್ಬವು  ಒಡಹುಟ್ಟಿದವರ  ನಡುವೆ ಇರುವ ಅವಿನಾಭಾವ ಆಚರಣೆಯಾಗಿದೆ. .                 "  ರಕ್ಷಾ  ಬಂದವನ್ನು  ಶ್ರಾವಣ ಮಾಸದ  ಹುಣ್ಣಿಮೆಯ " ದಿನದಂದು  ಈ ಹಬ್ಬವನ್ನು ಆಚರಿಸುತ್ತಾರೆ . ಉದಾ : ಹಿಂದೂ ಪುರಾಣಗಳ ಪ್ರಕಾರ  ಮಹಾಭಾರತ  ಮಹಾಕಾವ್ಯ, ಮಹಾಭಾರತದಲ್ಲಿ  ಕೃಷ್ಣನ  ಮಣಿಕ  ರಕ್ತಸ್ರಾವ್ ವಾಗುದನ್ನು ತಡೆಯಲು  ದ್ರೌಪದಿ ತನ್ನ  ಸೀರೆಯನ್ನು ಹರಿದು ಕೃಷ್ಣನಿಗೆ ಕಟ್ಟಿದಳು  ಈ ವೇಳೆ ದ್ರೌಪದಿಯೋ  ಕೃಷ್ಣನ  ಮೇಲೆ ಇಟ್ಟಿದ  ವಾತ್ಸಲ್ಯ, ಕಾಳಜಿ, ಕಂಡ  ಕೃಷ್ಣ  ಆಕೆಯನ್ನು ರಕ್ಷಣೆ ಮಾಡುವ  ಭರವಸೆb ನೀಡುತ್ತಾನೆ. .                .             ಪ್ರತಿಯೊಂದು ಹೆಣ್ಣಿಗೊ ತನ್ನ  ತಂದೆಯೇ ಮೊದಲ ಹೀರೊ.ತಂದೆಯ ನಂತರ  ಮುಖ್ಯವಾದ ವ್ಯಕ್ತಿ ಅಣ್ಣ. ಅಣ್ಣ ಎಂದರೇ  ಆಕೆಗೆ ಕೇವಲ  ಒಂದು ಪದವಲ್ಲ  ಅದಕ್ಕೂ  ಮೀರಿದ್ದು.  ಎಷ್ಟೇ ಕಷ್ಟಇದ್ದರೂ ಅದನ್ನು ಹೋಗಲಾಡಿಸಿ  ತಂಗಿ  ಬೆನ್ನೆಲುಬಾಗಿರುವನೇ ಅಣ್ಣ.  ತಂಗಿಗೋ ಅಷ್ಟೇ  ಬಾಲ್ಯದಿಂದಲೇ  ಅಣ್ಣನೇ ಆಕೆಯ  ಪ್ರಪಂಚ ಕಲ್ಮಶ  ಇಲ್ಲದ  ಪ್ರೀತಿ,ಕಾಳಜಿ, ಕಿತ್ತಾಟ, ಮಮತೆ, ಗೆಳತನ, ವಾತ್ಸಲ್ಯ, ಈ ಎಲ್ಲವನ್ನು ಒಬ್ಬ ವ್ಯಕ್ತಿಯಲ್ಲಿ ಕಾಣಬಹುದೇದರೆ  ಅದು ಅಣ್ಣನಲ್ಲಿ ಮಾತ್ರ. ಅಣ್ಣ  ಅವ

"ಗೆಳೆತನ"

ಹುಟ್ಟಿನಿಂದಲೇ ನಾವು ಹಲವಾರು ಸಂಬಂಧಗಳ ಜೊತೆಗೆ ಜನಿಸುತ್ತೇವೆ. ಇನ್ನು ಕೆಲವು ಸಂಬಂಧಗಳು ನಾವು ಸ್ವಯಂಕಾಲ ಕಳೆದಂತೆ ಮಾಡಿಕೊಳ್ಳುತ್ತೇವೆ. ಅಂತಹ ಸಂಬಂಧಗಳ ಸಾಲಿನಲ್ಲಿ ಗೆಳೆತನವು ಒಂದು. ಗೆಳೆತನ ಈ ಜಗತ್ತಿನ ಅತ್ಯಂತ ಸುಂದರವಾದ ಸಂಬಂಧ. ನಮ್ಮ ಜೀವನದಲ್ಲಿ ಬಹಳಷ್ಟು ಸ್ನೇಹಿತರಿರಬಹುದು ಆದರೆ ಅದರಲ್ಲಿ ಕೆಲವು ಸ್ನೇಹಿತರು ಮಾತ್ರ ಅತ್ಯಂತ ಆತ್ಮೀಯರಾಗಿರುತ್ತಾರೆ.  ನಿಜವಾದ ಸ್ನೇಹಿತ ನಮ್ಮ ಕಷ್ಟಕಾಲದಲ್ಲಿ ನಮ್ಮ ಜೊತೆಯಲ್ಲಿ ಇರುವವನು ಎಂದು ಜನ ಹೇಳುತ್ತಾರೆ. ಗೆಳೆತನ ಎಂದರೆ ಒಂದು ಅದ್ಭುತ ಸಂಬಂಧ ಏಕೆಂದರೆ ಯಾವ ಸಮಸ್ಯೆಗಳ ಬಗ್ಗೆ ನಾವು ನಮ್ಮ ಕುಟುಂಬಸ್ಥರ ಬಳಿ ಮಾತನಾಡಲು ಹಂಚುತ್ತೇವೆ ಆ ವಿಷಯವನ್ನು ಯಾವುದೇ ಪೀಠಿಕೆ ಇಲ್ಲದೆ ಅವರ ಮುಂದೆ ಇಡುತ್ತೇವೆ.  ನಮ್ಮ ಜೀವನದ ಉಲ್ಲಾಸ, ಹರ್ಷ, ಖುಷಿ ಮತ್ತು ಶೋಕದ ವಿಷಯವನ್ನು ತಿರುಚೆದೆ ಅದು ಹೇಗಿದ್ದೀಯಾ ಹಾಗೆ ಗೆಳೆಯರ ಮುಂದೆ ಪ್ರಸ್ತುತಪಡಿಸುತ್ತೇವೆ.  ಅವರು ಆ ಸಮಯದಲ್ಲಿ ನಮಗಿಂತಲೂ ಜಾಸ್ತಿ ಖುಷಿ ಮತ್ತು ದುಃಖವನ್ನು ವ್ಯಕ್ತಪಡಿಸುತ್ತಾರೆ.  ಗೆಳೆತನವನ್ನು ಯಾವಾಗಲೂ ವ್ಯಕ್ತಿಯ ನಡುವಳಿಕೆ ಚಾರಿತ್ರೆಯನ್ನು ನೋಡಿ ಮಾಡಲಾಗುತ್ತದೆಯೇ ಹೊರತು ಬಡವ -ಶ್ರೀಮಂತ,  ಜಾತಿ- ಧರ್ಮ ಅಥವಾ ನಿಜಿ ಯೋಜನೆ ಎಂದು ಮಾಡಿಕೊಳ್ಳಲಾಗುವುದಿಲ್ಲ. ಒಳ್ಳೆ ಗೆಳೆಯರ ಪರಿಚಯ ಮತ್ತು ಸಂಬಂಧಿಗಳ ಪರಿಚಯ ಕೆಟ್ಟ ಕಾಲದಲ್ಲಿ ಆಗುತ್ತದೆ ಎಂಬುದು ಸಹಜ ಸತ್ಯ.  ಒಂದು ಮಗುವಿನ ಜನ್ಮಕಿಂತಲೇ ಮೊದಲು ಬಹಳಷ್ಟು ಸಂಬಂಧದ ಕೊಂಡಿಗಳು ಪೋ

ಮಳೆಗಾಲದ ಆ‌ ದಿನಗಳು

  ಮಳೆಗಾಲ ಅಂದ್ರೆನೇ ಒಂಥರಾ ಮಜಾ. ಮಳೆಗಾಲ ಬರ್ಲಿ ಅಂತಾನೆ ಕಾಯ್ತಾ ಇರುವಂತಹ ರೈತರು, ಈಗ ಈಗಾ ಕಾಲೇಜು ಮೆಟ್ಟಿಲನ್ನ ಹತ್ತಿರುವಂತಹ ಹುಡುಗ್ರು. ಇವ್ರೆಲ್ಲಾ ಇದಕ್ಕಾಗಿಯೇ ಕಾಯ್ತಾ ಇರ್ತಾರೆ. ರೈತರು ಮಳೆ ಬರ್ಲಿ ಬೆಳೆ ಬೆಳೆಯೋಣ ಅಂತಾ ಕಾಯ್ತಿರ್ತಾರೆ ಆದ್ರೆ ನಮ್ ಹುಡುಗರು ಮಳೆ ಬಂದ್ರೆ ಅದರಲ್ಲೂ ಮಲೆನಾಡಿನವರು ಅಂತೂ ಬೈಕ್ ತಗೊಂಡು ಸ್ನೇಹಿತರ ಜೊತೆ ಬೆಟ್ಟ ಗುಡ್ಡ ಹತ್ತೋಕೆ, ಒಳ್ಳೊಳ್ಳೆ ಪಾಲ್ಸ್ ನೋಡೋಕೆ ಅಂತಾನೆ ರೆಡಿ ಆಗಿ ನಿಂತಿರ್ತಾರೆ. ಮಳೆಗಾಲದ ಸಮದಯಲ್ಲಿ ನಮ್ಮ ಹಳ್ಳಿ ಕಡೆ ಇರಬೇಕು ಆ ಜೀವನಾ ಅನುಭವಿಸಬೇಕು ಒಂಥರಾ ಸ್ವರ್ಗಕ್ಕೆ ಇನ್ನೊಂದೆ ಮೆಟ್ಟಿಲು ಇರುವ ಹಾಗೆ ಅನುಭವವಾಗುತ್ತದೆ.   ಮುಗಿಲಿಗೆ ತೂತು ಬಿದ್ದಿರುವ ಹಾಗೆ ಮನೆಯಿಂದ ಹೊರಗಡೆ ಕಾಲಿಡೊದಕ್ಕೂ ಸಾಧ್ಯ ಆಗೋದಿಲ್ಲ ಅಂತಹ ರಭಸವಾಗಿ ಬೀಳುವ ಮಳೆ. ಕೆರೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ ಉಕ್ಕಿ ಹರಿಯುತ್ತಾ ಇರುತ್ತವೆ. ಈ ಕಾಲದಲ್ಲಿ ಇಲ್ಲಿ ಒಂದಿಷ್ಟು ವಿದವಿಧವಾದ ಆಹಾರಗಳನ್ನು ಸವಿಯಬಹುದು. ಕಳಲೆ, ಅಣಬೆ, ಏಡಿ ಮತ್ತು ಜಬ್ಬು ಮೀನು ಹೀಗೆ ಹಲವಾರು ದೊರೆಯುತ್ತದೆ. ಇವುಗಳ ರುಚಿಯಂತು ಅದನ್ನು ವರ್ಣಿಸಲಾಗದು. ಹಲವಾರು ಮಂದಿ ಇದಕ್ಕಾಗಿಯೇ ಕಾಯ್ದು ಕೂತಿರುತ್ತಾರೆ. ಇಂತಹ ವಿಶೇಷವನ್ನು ಎಲ್ಲೆಡೆ ನೋಡಲು ಸಾಧ್ಯವಿಲ್ಲ  ಅದು ಮಲೆನಾಡಿನಲ್ಲಿ ಮಾತ್ರಾ ದೊರೆಯುತ್ತದೆ. ಮಲೆನಾಡಿನಲ್ಲಿ ಹುಟ್ಟಬೇಕೆಂದರೆ ಪುಣ್ಯ ಮಾಡಿರಬೇಕು ಎಂದು ಹೇಳುವುದಂತು ಸತ್ಯದ ಮಾತು.    ಮಲೆನಾಡಿನ ಹೆಬ್ಬಾಗಿಲು ಎಂದೇ

"ವೈದ್ಯವೃತ್ತಿ"

ಸಂಕಟ ಬಂದಾಗ ವೆಂಕಟರಮಣ' ಎನ್ನುವ ಹಾಗೆ ನಾವೆಲ್ಲರೂ, ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರನ್ನು ನೆನೆಸಿಕೊಳ್ಳುತ್ತೇವೆ. 'ವೈದ್ಯೋ ನಾರಾಯಣೋ ಹರಿ' ಎಂದು ಆತ (ಆಕೆ) ನನ್ನು ಹೊಗಳಿ ನಮ್ಮ ಕಷ್ಟ ಕೋಟಲೆಗಳನ್ನು ತೋಡಿಕೊಳ್ಳುತ್ತೇವೆ. ಆತನ (ಆಕೆಯ) ಉಪಚಾರದಿಂದ ರೋಗ ವಾಸಿಯಾದ ತಕ್ಷಣ ಆತ (ಆಕೆ ನನ್ನು ಮರೆತು ಬಿಡುತ್ತೇವೆ. 'ತಮ್ಮ ಕೆಲಸ ಆದ ಮೇಲೆ ಉಪಾಧ್ಯಾಯ ಮತ್ತು ವೈದ್ಯ ನಿಷ್ಪಯೋಜಕರಾಗುತ್ತಾರೆ' ಎನ್ನುವ ವಚನವನ್ನು ನಿಜ ಮಾಡುತ್ತೇವೆ. ಇದರಲ್ಲಿ ಅತಿಶಯವೇನಿಲ್ಲ. ನಮ್ಮ ದೇಹ ಮತ್ತು ಮನಸ್ಸಿನ ಬಗ್ಗೆ ಕಾಳಜಿಯಿಂದ ಆಳವಾಗಿ ಅಭ್ಯಾಸ ಮಾಡಿ ಚಿಂತಾಕ್ರಾಂತರಾಗಿ ನರಳುತ್ತಿರುವವರನ್ನು ಮತ್ತೆ 'ಜೀವನ್ಮುಖಿ'ಗಳಾಗಿ ಮಾಡುವ ವೈದ್ಯರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಈ ಕರ್ತವ್ಯ ಋಣ ಸಂದಾಯ ಎಂದರೆ ತಪ್ಪೇನಿಲ್ಲ ವನ್ನು ನೆನಪಿಸಲು ಪ್ರತಿ ವರ್ಷ ಜುಲೈ ಒಂದೇ ದಿನಾಂಕ 'ರಾಷ್ಟ್ರೀಯ ವೈದ್ಯದಿನ", ವನ್ನಾಗಿ ಆಚರಿಸುವುದು ರೂಢಿಗೆ ಬಂದಿದೆ. ಶಿಕ್ಷಕ ವೃತ್ತಿಯಷ್ಟೇ ಪವಿತ್ರ ಎನ್ನಿಸುವ ವೈದ್ಯ ವೃತ್ತಿ ನಮ್ಮ ದೇಶದಲ್ಲಿ ಸುಮಾರು 2500 ವರ್ಷಗಳಿಂದ ಆಚರಣೆಯಲ್ಲಿದೆ. ವೇದಗಳಲ್ಲಿ ಎಲ್ಲೆಲ್ಲೋ ಅಡಕವಾಗಿದ್ದ ಆಯುರ್ವೇದ ತತ್ತ್ವಗಳನ್ನು ಕ್ರೋಢೀಕರಿಸಿ, ತಮ್ಮ ಚಿಂತನೆಗಳನ್ನು ಸೇರಿಸಿ ಬರೆದ 'ಸುಶ್ರುತ ಸಂಹಿತೆ'ಯನ್ನು ಹಿಂದೂ ವೈದ್ಯ ವಿಜ್ಞಾನದ ಬೈಬಲ್‌ ಎಂತಲೂ, ಇದನ್ನು ರಚಿಸಿದ ಸುಶ್ರುತರನ್ನು (ಸುಮಾರು ಕ

ಮೊಬೈಲ್ ಎಂಬ ಮಾಯಾಲೋಕ

 ಯಾರಾದರೂ ಒಬ್ಬರು ಮೊಬೈಲ್ ನಿಂದ ನನ್ನ ಸಂಸಾರಚೆನ್ನಾಗಿದೆ  ನನ್ನ ವೃತ್ತಿಯಲ್ಲಿ ಬೆಳವಣಿಗೆ ಕಂಡಿದ್ದೇನೆ     ನನಗೆ ನೆಮ್ಮದಿ ಸಿಕ್ಕಿದೆ ಮೊದಲು ನಿಂದಲೂ ನಾನು ಅತಿ ಸಂತೋಷವಾಗಿದ್ದೇನೆ. ಎಂದು ಹೇಳಲಿ ನೋಡೋಣ ಮೊಬೈಲ್ ಇದು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಆಗ ತಾನೇ ಅಮ್ಮ ಎಂದು ಹೇಳಲು ಕಲಿತ ಮಗುವಿನಿಂದ ಹಿಡಿದು ಬಿಳಿ ಗಡ್ಡ ಬೆಳೆದ  ಜೀವಕ್ಕೂ ಬೇಕು. ಮನುಷ್ಯನ ಎಲ್ಲಾ ಸಂಬಂಧಿಗಳಿಗಿಂತಲೂ ಶ್ರೇಷ್ಠ ಎಂದು ಅಂದುಕೊಂಡಿದ್ದೇವೆ. ಮೊಬೈಲ್ ಎಂಬ ಮಾಯಾವಿಯು ಮೊದಮೊದಲು ಬಂದಾಗ ಬಿಗಿದ್ದೇವೆ. ಇನ್ನು ಮುಂದೆ ಇಡೀ ಪ್ರಪಂಚ ನಮ್ಮ ಅಂಗೈಯಲ್ಲಿ ಇರುತ್ತದೆ ಎಂದು ಆದರೆ ಇಂದು ನಾವು ಅದರ ಸುಳ್ಳಿಗೆ ಸಿಲುಕಿದ್ದೇವೆ ಮೊಬೈಲ್ ಇದು ಕೇವಲ ಫೋನ್ ಮಾಡುಲು ಮೆಸೇಜ್ ಮಾಡಲು ಅಷ್ಟೇ  ಉಳಿದಿದ್ದರೆ ಬಹುಶ: ಮೊಬೈಲ್ ಒಂದು ಮೆಸೇಜ್ ಆಗುತ್ತಿರಲಿಲ್ಲ. ಇದು ಮೊಬೈಲ್ ಮಾಡಬೇಕಾದ ಕೆಲಸವನಷ್ಟು ಮಾಡದೇ ಟಿವಿ ರೇಡಿಯೋ ಪುಸ್ತಕ ಹೀಗೆ ಅನೇಕ ವಸ್ತುವಿನ ಕೆಲಸದ ಪಾರ್ಟ್ ಟೈಮ್ ಲೆಕ್ಕದಲ್ಲಿ ಕೆಲಸ ಮಾಡುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ನಮಗೆ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ .ಎಷ್ಟರಮಟ್ಟಿಗೆ ಎಂದರೆ ಮೊಬೈಲ್ ಇಲ್ಲದೆ ನಾವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ .ಮೊಬೈಲ್ ಈ ಪ್ರಪಂಚಕ್ಕೆ ಕಾಲಿಡುವುದಕ್ಕಿಂತ ಮೊದಲು ನಮ್ಮ ಪೂರ್ವಜರು ಅದು ಹೇಗೆ ಬದುಕಿದ್ದಾರೋ ಎಂಬ ಅನುಮಾನ ಬರುವಷ್ಟು. ಆದರೆ ಈಗ ಅದ್ಯಾವ ಮನೆಯಲ್ಲಿ ಕೂಡ ಚಿಕ್ಕ ಮಕ್ಕಳ ಚಿರಾಟ ಕೇಳ