ಪೋಸ್ಟ್‌ಗಳು

 ನೀರಿನ ಬಾಟಲ್  ಬೇಸಿಗೆ ರಜಾ ಬಂದರೆ ಮಕ್ಕಳಿಗೆ ಖುಷಿಯಾಗುತ್ತದೆಯೋ ಅದೇ ರೀತಿ ಭೂಮಿಯ ಮಕ್ಕಳಾದ ರೈತರಿಗೆ ದುಃಖವಾಗುತ್ತದೆ ನೀರನ್ನು ಕೈಯಿಂದ ಹಿಡಿಯಲು ಸಾಧ್ಯವಾಗದು ಆದರೆ ಹಿಡಿಯಲು ಒಂದು ಸಾಧನವಿದೆ ಅದೇನಂದರೆ ಬಾಟಲ್ ನೀರು ಹಾಗೂ ಇದನ್ನು ಜೋಡೆತ್ತು ಎಂದರೆ ತಪ್ಪಾಗಲಾರದು ನೀರು ಒಂದು ಅಮೂಲ್ಯವಾದದ್ದು ಎಲ್ಲಾ ಸಂದರ್ಭದಲ್ಲಿ ನೀರು ಪ್ರಮುಖವಾದ ಪಾತ್ರ ವಹಿಸುತ್ತದೆ ನೀರನ್ನು ಯಾವುದೇ ಬಾಟಲಿಗೆ ಹಾಕಿದಾಗ ಅದರ ಬಣ್ಣವನ್ನು ಮೈಗೂಡಿಸಿಕೊಂಡು ಸ್ಥಿರವಾಗಿ ನಿಂತಿರುತ್ತದೆ ನೀರಿನ ಪ್ರಮುಖ ವಿಶೇಷ ಎಂದರೆ ಬಾಟಲಿಯ ಯಾವುದೇ ಆಕಾರವಿರಲಿ ನೀರು ಅದೇ ಆಕಾರಕ್ಕೇ ಒಗ್ಗಿಕೊಳ್ಳುವುದು ಒಂದು ವಿಶೇಷ ಮನುಷ್ಯನ ಜೀವನದಲ್ಲಿ ನೀರು ಬಹಳ ಮುಖ್ಯವಾಗಿರುತ್ತದೆ ನೀರನ್ನು ತೆಗೆದುಕೊಂಡು ಹೋಗಲು ನೀರಿನ ಬಾಟಲ್ ಒಂದು ವಸ್ತು ಮನುಷ್ಯನು ತಾಪಮಾನದಿಂದ ತನ್ನನ್ನು ರಕ್ಷಿಸಲು ತನ್ನ ತಲೆಯ ಮೇಲೆ ಹ್ಯಾಟ ನ್ನು ಧರಿಸಿರುತ್ತಾನೆ ನೀರನ್ನು ಸುರಕ್ಷಿತವಾಗಿ ಶುದ್ಧವಾಗಿ ಇಡಲು ಬಾಟಲಿಯ ತಲೆ ಮೇಲೆ ಒಂದು ಮುಚ್ಚುಳವನ್ನು ಧರಿಸಿರುತ್ತದೆ, ಮನುಷ್ಯನಿಗೆ ಬಾಯಾರಿಕೆ ಆದಾಗ ಬಾಟಲಿಯಲ್ಲಿರುವ ನೀರು ಕುಡಿದು ಹಾಗೆ ಮತ್ತೆ ಬಾಯಾರಿಕೆ ಆದಾಗ ನೀರನ್ನು ಸಂಗ್ರಹಿಸಲು ಉತ್ತಮವಾದ ಮಾರ್ಗವಾಗಿದೆ ಯಾವುದೇ ಸಮಾರಂಭದಲ್ಲಿ ಬಾಳೆ ಎಲೆ ಹಾಗೂ  ಬಾಟಲಿ ಎರಡು ಜಂಟಿಯಾಗಿ ಕಾರ್ಯನಿರ್ವಹಿಸುತ್ತದ ಕೆಲವೊಂದು ಸಂದರ್ಭದಲ್ಲಿ ನಾವು ಜಾಸ್ತಿ ನೋಡುವುದು ಮದುವೆಯಲ್ಲಿ ಮಕ್ಕಳು ಬಾಟಲಿಯೊಂದಿಗ...
 ಫ್ರೆಂಡ್ ಅನ್ನೋ ಶಿಪ್ ಗೆ ನಾವೇ ಮೊಳೆ ಹೊಡೆದುಕೊಂಡರೆ ಹೇಗೆ?  ತುಂಬಾ ಸಲ ಹೀಗಾಗುತ್ತದೆ.  ಫ್ರೆಂಡ್ ಗೆ ಫೋನ್ ಮಾಡಬೇಕು ಅಂದುಕೊಳ್ಳುತ್ತಿರುತ್ತೇವೆ. ಆದರೆ ಮಾಡಲ್ಲ. ಫೋನ್ ಮಾಡೋಕೆ ಸಾಧ್ಯವಾಗೋಲ್ಲ ಅನ್ನುವುದು ಬೇರೆ ವಿಚಾರ, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಕೆಲಸದ ಒತ್ತಡ, ಟ್ರಾವೆಲಿಂಗ್, ಮೀಟಿಂಗ್, ಈಟಿಂಗ್, ಆಯಾಸ, ಹುಷಾರಿಲ್ಲ. ಅವಳು ಬ್ಯುಸಿ ಯಾಗಿರಬೇಕು ಬಿಡು ಅಂತ ಇವನು. ಇವನು ಬ್ಯುಸಿ ಯಾಗಿದ್ದಾನೋ ಏನು ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಅವಳು. ಒಟ್ಟಿನಲ್ಲಿ ನೋ ಕಾಂಟಾಕ್ಟ್, ಫೋನ್ ಮಾಡದೇ ಇರುವುದಕ್ಕೆ ಬ್ಯುಸಿ ಅನ್ನೋದು ಒಂದು ಅಡ್ಡ ನೆಪ ಅಷ್ಟೇ.  ಆದರೆ ಇನ್ನೊಂದು ಕಾರಣವಿದೆ.  ಅವನು ಮಾಡಲಿ ಬಿಡು, ಏನು ದಾಡಿ ಅವನಿಗೆ? ಒಂದು ಫೋನ್ ಮಾಡೋದಕ್ಕೆ ಆಗೋಲ್ವಾ? ಪ್ರತಿ ಸಲ ನಾನೇ ಮಾಡ್ಬೇಕಾ? ಅನ್ನೋ ಅಹಂ, ಅದು ಒಂದು ಸಾರಿ ಬಂದು ಇಬ್ಬರ ಮನದಲ್ಲೂ ಕುಳಿತು ಬಿಟ್ಟರೆ ಆ ಫ್ರೆಂಡ್ ಶಿಪ್ ಹಳಿಸಿತು ಅಂತಲೇ ಅರ್ಥ. ಹೀಗಾದಾಗ ಫ್ರೆಂಡ್ ಅನ್ನೋ ಶಿಪ್ ಅಹಂ ಅನ್ನೇ ಅಲೆಯಾಗಿಸಿಕೊಂಡು ಮುಳಗಿ ಹೋಗುತ್ತದೆ.  ಕೊನೆಗೆ ಫ್ರೆಂಡ್ ಎಲ್ಲೋ ಮರೆತೇ ಹೋಗುತ್ತಾನೆ. ಮಾತು ನಿಂತು ಹೋಗುತ್ತದೆ. ಫೋನ್ ನಂಬರ್ ಮರೆತು ಹೋಗುತ್ತದೆ. ಕೆಲವೇ ದಿನಗಳ ಹಿಂದೆ ಪ್ರತಿಯೊಂದಕ್ಕೂ ಬೇಕಾಗಿದ್ದ ಫ್ರೆಂಡ್ ನ ಸ್ಥಾನಕ್ಕೆ ಇನ್ಯಾರೋ ಒಬ್ಬ ಫ್ರೆಂಡ್ ಬಂದು ಕುಳಿತುಬಿಡುತ್ತಾನೆ. ನೆನಪಿರಲಿ ಆ ಫ್ರೆಂಡು  ಒಂದಲ್ಲ ಒಂದು ದ...

ಅಡಕೆ ಬೀಳದಿರಲಿ ಕೆಳಕ್ಕೆ

ಇಮೇಜ್
                    ಮಲೆನಾಡು ಭಾಗದ ಪ್ರಮುಖ ಜಿಲ್ಲೆ ಉತ್ತರ ಕನ್ನಡ .ಮಲೆನಾಡು ಮತ್ತು ಕರಾವಳಿ ಪ್ರದೇಶವನ್ನು ಒಳಗೊಂಡಿದ್ದು, ರಾಜ್ಯದಲ್ಲಿನ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದು. ನಾವು ಇಲ್ಲಿ ತಲೆತಲಾಂತರದಿಂದಲೂ ಅಡಕೆಯನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆದುಕೊಂಡು ಬಂದಿದ್ದೇವೆ. ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ಪ್ರದೇಶವಿದು. ಒಂದು ಕಾಲದಲ್ಲಿ ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಡಕೆ ಬೆಳೆಯುವ ಜಿಲ್ಲೆ ನಮ್ಮದಾಗಿತ್ತು.                                       ಸುಮಾರು ಹದಿನೈದು ವರ್ಷಗಳಿಂದೀಚೆ ಅಡಕೆಗೆ ಉತ್ತಮ ದರ ಬರಲು ಆರಂಭವಾದ್ದರಿಂದ ಅಸಾಂಪ್ರದಾಯಿಕ  ಪ್ರದೇಶದಲ್ಲೂ ಅಡಕೆ ತೋಟಗಳು ತಲೆಯೆತ್ತತೊಡಗಿದವು. ನಮ್ಮದು ಗುಡ್ಡಗಾಡು ಪ್ರದೇಶವಾದ್ದರಿಂದ, ಮಳೆ ಹೆಚ್ಚು ಬೀಳುವುದರಿಂದ, ಮಣ್ಣಿನ ಫಲವತ್ತತೆಯು ಸಾಮಾನ್ಯವಾಗಿರುವುದರಿಂದ ಸಹಜವಾಗಿ ತೋಟಗಳು ಹೆಚ್ಚಿನ ಕೆಲಸವನ್ನು ಬಯಸುತ್ತಿವೆ. ಆದರೆ ಬಯಲು ಸೀಮೆಗಳಲ್ಲಿ ನಮ್ಮಲ್ಲಿರುವ ಯಾವ ಸಮಸ್ಯೆಯೂ ಇಲ್ಲದಿರು ವುದರಿಂದ ಕಡಿಮೆ ಖರ್ಚಿನಲ್ಲಿ ತೋಟದ ನಿರ್ವಹಣೆ ಆಗುವುದರೊಂದಿಗೆ ಉತ್ತಮ ಫಸಲು ಕೂಡ ದೊರೆಯುತ್ತದೆ. ಆದರೆ ಹೀಗೆ ಆಗಲು ಸಾಕಷ್ಟು ನೀರು ಬೇಕು ಎನ್ನುವುದನ್ನೂ ಮರೆಯುವಂತಿಲ್ಲ. ...
 “ಹೋರಿ ಹಬ್ಬ”  ಹೋರಿ ಹಬ್ಬ, ಹಟ್ಟಿ ಹಬ್ಬ, ಅಥವಾ ಕೊಬ್ಬರಿ ಹೋರಿ ಸ್ಪರ್ಧೆಯು ಒಂದು ಗ್ರಾಮೀಣ ಕ್ರೀಡೆಯಾಗಿದ್ದು, ಇದರಲ್ಲಿ ನೂರಾರು ತರಬೇತಿ ಪಡೆದ ಮತ್ತು ಅಲಂಕರಿಸಿದ ರಾಸುಗಳು ಮತ್ತು ಗೂಳಿಗಳನ್ನು ಭಾರಿ ಜನಸಂದಣಿಯ ನಡುವೆ ಓಡಿಸಲಾಗುತ್ತದೆ . ಈ ಗೂಳಿಗಳ ಕೊರಳಿಗೆ ಕೊಬ್ಬರಿ ಗಳನ್ನು ಕಟ್ಟಲಾಗಿರುತ್ತದೆ. ಗೂಳಿ ಹಿಡಿಯುವವರು , ಈ ಗೂಳಿಯ ಕೊರಳಲ್ಲಿ ಇರುವ ಕೊಬ್ಬರಿಯನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಕ್ರೀಡೆಯನ್ನು ಮುಖ್ಯವಾಗಿ ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಭ್ಯಾಸ ಮಾಡಲಾಗುತ್ತದೆ.ನಮ್ಮ ಹಾವೇರಿ ಜೆಲ್ಲೆಯನು ಹೋರಿಹಬ್ಬದ ತ್ತವರೂರು ಎಂದು ಕರೆಯುತ್ತಾರೆ.                 ಹೋರಿಗಳ ಮಾಲೀಕರು ಋತುವಿನ ಮುಂಚೆಯೇ ಅವುಗಳಿಗೆ ಪೌಷ್ಟಿಕ ಆಹಾರವನ್ನು ನೀಡುವ ಮೂಲಕ ಅವುಗಳನ್ನು ಹೋರಿಹಬ್ಬಕ್ಕಾಗಿ ತಯಾರು ಮಾಡುತ್ತಾರೆ. ಅವರು ಅವುಗಳನ್ನು ಮುದ್ದಿಸುತ್ತಾರೆ, ಅವುಗಳನ್ನು ತಂಪಾಗಿರಿಸಲು ನಿಯಮಿತವಾಗಿ ಸ್ನಾನವನ್ನು ಮಾಡಿಸುತ್ತಾರೆ.ಇದರಿಂದಾಗಿ ಗೂಳಿಗಳು ನಿಸ್ಸಂದೇಹವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುತ್ತವೆ. ಹತ್ತಿರದ ಪ್ರದೇಶಗಳ ಮಾಲೀಕರು ಎತ್ತುಗಳನ್ನು ನಿಯಮಿತವಾಗಿ ಓಡಿಸುವ ಮೂಲಕ ನಿಜವಾದ ಅಖಾಡದ ಓಟಕ್ಕೆ ತರಬೇತಿ ನೀಡುತ್ತಾರೆಯಾವುದೇ ಎರಡು ಜಾನುವಾರುಗಳನ್ನು ಸಾಕಷ್ಟು ಸಮಯದ ...
 ಸ್ನೇಹ  ಇದು ಇಬ್ಬರು ವ್ಯಕ್ತಿಗಳ ನಡುವಿನ ಸಂಬಂದ ದ ಶುದ್ಧ ರೂಪವಾಗಿದೆ. ಇದು ಜನರ ನಡುವಿನ ಪರಸ್ಪರ ಪ್ರೀತಿ. ಆದರೆ, ಇದು ಕೇವಲ ಪರಸ್ಪರ ಪ್ರೀತಿಯೇ..?  ಯಾವಾಗಲೂ ಅಲ್ಲ, ಉತ್ತಮ ಸ್ನೇಹಿತರು ಪರಸ್ಪರರ ಭಾವನೆಗಳನ್ನು ಅಥವಾ ಕಲ್ಪನೆಗಳನ್ನು ಹಂಚಿಕೊಳ್ಳುತ್ತಾರೆ, ಅದು ಸಮೃದ್ಧಿ & ಮಾನಸಿಕ ನೆರವೇರಿಕೆಯ ಭಾವನೆಯನ್ನು ತರುತ್ತದೆ.               ಒಬ್ಬ ಸ್ನೇಹಿತನು ಒಬ್ಬ ವ್ಯಕ್ತಿಯನ್ನು ಆಳವಾಗಿ ತಿಳಿದುಕೊಳ್ಳಬಹುದು, ಮತ್ತು ಶಾಶ್ವತವಾಗಿ ನಂಬಬಹುದು. ಸ್ನೇಹಕ್ಕೆ ಸಂಬಂಧಿಸಿರುವ ಇಬ್ಬರು ವ್ಯಕ್ತಿಗಳ ಕಲ್ಪನೆಯಲ್ಲಿ ಕೆಲವು ಹೋಲಿಕೆಗಳನ್ನು ಹೊಂದುವ ಬದಲು, ಅವರು ಅಸಾಮಾನ್ಯ ಗುಣಗಳನ್ನು ಹೊಂದಿದ್ದರು ಅವರು ತಮ್ಮ ಅನನ್ಯತೆಯನ್ನು ಬದಲಿಸದೆ ಪರಸ್ಪರ ಇರಲು ಬಯಸುತ್ತಾರೆ. ಬಹುಮಟ್ಟಿಗೆ, ಸ್ನೇಹಿತರು ಖಂಡನೆ ಇಲ್ಲದೇ ಒಬ್ಬರನ್ನೊಬ್ಬರು  ಪ್ರಚೋದಿಸುತ್ತಾರೆ.  ಕೆಲವೊಮ್ಮೆ ಉತ್ತಮ ಸ್ನೇಹಿತರು ಪರಿಶೀಲಿಸುತ್ತಾರೆ ಧನಾತ್ಮಕ ರೀತಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತಾರೆ.                ಜೀವನದಲ್ಲಿ ಸ್ನೇಹಿತರನ್ನು ಹೊಂದಿರುವುದು ಬಹಳ ಮುಖ್ಯ. ಪ್ರತಿಯೊಬ್ಬ ಸ್ನೇಹಿತನು ಅತ್ಯ ಗತ್ಯ್ ಮತ್ತು ಕೆಲವು ಸಂದರ್ಭಗಳಲ್ಲಿ ಹೊರಹೊಮಿದಾಗ ಅವರ ಮಹತ್ವ ನಮಗೆ ತಿಳಿದಿರುತ್ತದೆ ಅದನು ತಮ್ಮ ಸ್ನೇಹಿತರು ಬೆಂಬಲಿಸಬೇಕು .ಅವನು ಅಥವಾ ಅ...
 *✰━ ಅಪ್ಪ ಎಂದರೆ ಆಕಾಶ ━✰* ಅಪ್ಪ ಅಂದ್ರೆ ನಿಷ್ಕಲ್ಮಶ ಪ್ರೀತಿಯನ್ನು ಧಾರೆಯೆರೆದು ಕೊಡುವವನು.  ಅಪ್ಪ ಅಂದ್ರೆ ಕೇಳಿದ್ದನ್ನೆಲ್ಲಾ ಕೈಲಾದಷ್ಟು ಕೊಡಿಸುವವನು... ಅಪ್ಪ ಅಂದ್ರೆ ಕುಟುಂಬದ ಶಕ್ತಿ... ಮಕ್ಕಳಿಗೆ ಮೊದಲ ಹೀರೋ... ಅಪ್ಪ ಅಂದ್ರೆ ಆಕಾಶ...                    ಪ್ರತಿ ಸಂಸಾರದ ಆಧಾರಸ್ತಂಭವಾಗಿ ಮನೆಯವರ ಪೊರೆಯನ್ನು, ಸಂಭಾಳಿಸುವ ಅದ್ಬುತ ಶಕ್ತಿಯೇ ಅಪ್ಪ ! ಅಮ್ಮ ಮನೆಯ ನಂದಾದೀಪವಾದರೆ ಅಪ್ಪ ಮನೆಯೊಳಗು, ಹೊರಗೂ ಪ್ರಜ್ವಲಿಸುವ ದೀಪ. ಇಡೀ ಜಗವು ಪ್ರತಿ ಬಾರಿ ಅಮ್ಮನನ್ನು ದೈವೀ ಸ್ವರೂಪ,  ಮಮತೆಯ - ಕಾಳಜಿಯ ಸಂಕೇತವೆಂದು ಸಾರುತ್ತದೆ ಆದರೆ ಅಪ್ಪ ಎಂಬ ಅಗಣಿತ ಪ್ರೇಮ,  ಶಿಸ್ತಿನ ಶಕ್ತಿಯನ್ನು ನೆನೆಪಿಸಿಕೊಳ್ಳುವುದು ಕೇವಲ "ಅಪ್ಪಂದಿರ ದಿನಕ್ಕೆ" ಮಾತ್ರ !               ಮಕ್ಕಳು ಅತ್ತಾಗ, ನೋವಾದಾಗ ಕೂಡಲೇ ತಾಯಿಯು ಕಳವಳಗೊಂಡು ಮಮಕರಿಸಿ, ಒಲುಮೆಯ ಧಾರೆ ಹರಿಸಿ ಸಂತೈಸುವುದು ಹೌದಾದರೂ, ತಂದೆ ಎಂಬ ಭಾವ ತನಗೇನು ಸಂಬಂಧವಿಲ್ಲದಂತೆ ಒಮ್ಮೊಮ್ಮೆ ವರ್ತಿಸಿದರೂ, ಅಮ್ಮ ಮಕ್ಕಳ ಮಮಕಾರವನ್ನು ಕಣ್ಣಲ್ಲೇ ತುಂಬಿಕೊಂಡು, ಒಳಗೊಳಗೇ ಸಂಭ್ರಮಿಸುವ  ಪರಿ ಕೇವಲ ಅಮ್ಮನಿಗೆ ಮಾತ್ರ ತಿಳಿಯುವಂತದ್ದು. ತನ್ನ ಪ್ರೇಮ ಅತಿಯಾದ ಕಾಳಜಿ ತನ್ನ ಮಗುವಿನ ಭವಿಷ್ಯಕ್ಕೆ ತೊಡಕಾಗಬಾರದೆಂದು,  ತನ್ನೆಲ್ಲಾ ಅಕ...
 *ಗುರಿ ಇಲ್ಲದ ವಿದ್ಯಾರ್ಥಿ ಜೀವನ ನಿಯಂತ್ರಿಸಲು ಹಾಸ್ಟೆಲ್ ಉತ್ತಮ ದಾರಿ:* ದಿನೇ ದಿನೇ ನಮ್ಮ ಶಿಕ್ಷಣ ಜಗತ್ತು ಬದಲಾವಣೆಯಾಗುವ ಹಾಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಂಬಲಿಸುತ್ತ ದೂರದ ಊರಿಗೆ ಪಯಣ ಬೆಳೆಸುತ್ತಿದ್ದಾರೆ ಶಿಕ್ಷಣವು ವಿದ್ಯಾರ್ಥಿ ಜೀವನದ ಹೊಸ ತಿರುವನ್ನುಕೊಡುತ್ತಿದೆ ದೂರದ ಊರಿಗೆ ಹೋದಾಗ ಹಾಸ್ಟೆಲ  ಎಂಬುದು ಎಲ್ಲರಿಗೂ ಅನಿವಾರ್ಯವಾಗುತ್ತದೆ ಹಾಸ್ಟೆಲ್ ಗಳಿಗೆ ಮಕ್ಕಳನ್ನು ಸೇರಿಸುವಾಗ ಪೋಷಕರು ಹೆಚ್ಚಾದ ಆತಂಕ ಪಡುತ್ತಾರೆ ಕಾರಣ ಏನೆಂದರೆ ಅಲ್ಲಿ ಅಪ್ಪ ಅಮ್ಮ ಮತ್ತು ಸಹೋದರರ ಪ್ರೀತಿ ಸಿಗುವುದಿಲ್ಲ ಎಂಬ ಆತಂಕ ಹಾಗೂ ಇಷ್ಟವಾದ ಆಹಾರ ಸಿಗುವುದಿಲ್ಲ ಸರಿಯಾದ ಪಾಲನೆ ಸಿಗುವುದಿಲ್ಲ ಇದರ ಜೊತೆಗೆ ಹಬ್ಬ ಹರಿದಿನ ಬಂದರೆ ಮಕ್ಕಳು ಮನೆಗೆ ಬರುವುದಿಲ್ಲ ಹಾಗಾಗಿ ಕೆಲ ಪೋಷಕರು ವಿದ್ಯಾರ್ಥಿಗಳನ್ನು ಕಳುಹಿಸಲು ಹಿಂಜರಿಯುತ್ತಾರೆ, ಆದರೆ ಹಾಸ್ಟೆಲ್ ಗೆ ಹೂಕ್ಕ ಮೇಲೆ ಅಲ್ಲಿನ ನೀತಿ ನಿರೂಪಣೆ ತಕ್ಕಂತೆ ನಡೆದುಕೊಂಡಲ್ಲಿ ಮನೆಯಿಂದ ಸಿಗುವ ಮೌಲ್ಯಗಳು ಜೊತೆಗೆ ಸ್ವಾಲಂಬಿ ಬದುಕು ಸಹ ಬಾಳ್ವೆ ಮೊದಲಾದ ಜೀವನ ರೂಪಿಸುವ ಮೌಲ್ಯಗಳು ದೊರೆಯುತ್ತದೆ ಅನ್ನುವುದು ಅಷ್ಟೇ ಸತ್ಯ. ಮನೆಯಲ್ಲಿ ಅಪ್ಪ ಅಮ್ಮನ ಶಿಸ್ತಿನ ಗರಡಿಯಲ್ಲಿ ಇರುವ ಮಕ್ಕಳು ಒಮ್ಮೊಮ್ಮೆ ಯಾಮಾರಿಸಿ ತನ್ನಿಷ್ಟದಂತೆ ನಡೆಯುವುದುಂಟು ಆದರೆ ಹಾಸ್ಟೆಲ್ ನಲ್ಲಿ ಆ ತರಹ ಮಾಡುವುದು ಅಷ್ಟು ಸುಲಭವಲ್ಲ‌. ಆರಂಭದ ದಿನಗಳಲ್ಲಿ ಕೊಂಚ ಕಷ್ಟ ಅನಿಸಿದರೆ ಅದನ್ನು ಸಹಿಸಿಕೊಂಡು ನಿಂತರೆ, ಅ...
 "__ನಮ್ಮ  ಕಲೆ  ಯಕ್ಷಗಾನ__" ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣ ಗಳನ್ನು ಒಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ .                                         ಯಕ್ಷಗಾನವು ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಪ್ರಸ್ತುತಪಡಿಸುವ ಒಂದು ನಾಟಕೀಯ ರೂಪವಾಗಿದೆ.ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ  ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ.ಇದರಲ್ಲಿ ಎರಡು ಪ್ರಕಾರಗಳಿವೆ.ಒಂದು ತೆಂಕುತಿಟ್ಟು ಇದು ದಕ್ಷಿಣ ಕನ್ನಡದಿಂದ ತುಳುನಾಡು ಪ್ರದೇಶದ ಕಾಸರಗೋಡಿನವರೆಗೆ ಯಕ್ಷಗಾನದ ರೂಪವನ್ನು ತೆಂಕುತಿಟ್ಟು ಎನ್ನುವರು.ಮತ್ತು ಎರಡನೆಯದು ಬಡಗುತಿಟ್ಟು ಇದು ಉಡುಪಿಯಿಂದ ಉತ್ತರ ಕನ್ನಡದವರೆಗೆ ಬಡಗುತಿಟ್ಟು ಎನ್ನುವರು.ಈ ಎರಡು ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಈ ಕಲೆಯು ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವುದೇ ನಮ್ಮ ಹೆಮ್ಮೆ.                                         ಯಕ್ಷಗಾನದ ಪ್ರಮುಖ ಅಂಶಗಳು:–     1) ಪ್ರಸಂಗ:   ಯಕ್ಷಗಾನದಲ್ಲಿ ಯಾವುದಾದರೂ ಒಂದು ...
 ಭೂಮಿಯಿಂದ ಸೂರ್ಯ ಬಹಳಷ್ಟು ದೂರವಿದ್ದಾನೆ ಆದರೆ ನಮ್ಮ ಆಲೋಚನೆ ಪ್ರಕಾರ ತೆಂಗಿನಮರದ ಹಾಗೆ ಎತ್ತರವಿರುವ ಅದರ ತುತ್ತ ತುದಿಯಲ್ಲಿ  ಹಲವಾರು ಕಾಯಿಗಳ ಸಮೂಹವಿದೆ ಆದರೆ ತೆಂಗಿನ  ಮರಕ್ಕಿಂತ ಸ್ವಲ್ಪ ಕಿರಿದಾಗಿ ನಮ್ಮ ಮುಂದಕ್ಕೆ  ಕೈಹಿಡಿದು, ಕರೆದುಕೊಂಡು ಹೋಗುವುದೇ ಬೀದಿ ದೀಪ  ಬೀದಿ ದೀಪದ ಕಂಬವು ಅನೇಕ ತಂತಿಗಳಿದ ಸುತ್ತಿಕೊಂಡು ಕೆಲವು ತಂತಿಗಳು ಅನೇಕ ಮನೆಗಳಿಗೆ ಸಹಕರಿಸಿ ವಿದ್ಯುತ್ತನ್ನು ಪೂರೈಸುವ ಮೂಲಕ ಮನೆ ಬೆಳಗುತ್ತಿದೆ ಜನರು ಸೂರ್ಯನ ಹತ್ತಿರ ಹೋಗುವುದು ಒಂದು ಹಾಸ್ಯಸ್ಪದ ಮಾತಾಗಿದೆ ಬೀದಿ ದೀಪವನ್ನು ನೋಡಿ ಸೂರ್ಯನಂತೆ ಕಲ್ಪಿಸಿಕೊಂಡರೆ ಮಾನವನ ಬುದ್ಧಿವಂತಿಕೆಯನ್ನು ತೋರಿಸುತ್ತದೆ ಒಂದು ಕ್ಷಣ ನಾವು ಯೋಚಿಸೋಣ ಬೀದಿ ದೀಪಗಳ ಒಂದು ವಿಷಯವಿಲ್ಲದಿದ್ದರೆ ಎಷ್ಟು ಸಾವು ನೋವು ಸಂಭವಿಸುವುದು ಎಂದು ಪ್ರತಿಯೊಂದು ಕೆಲಸದಲ್ಲಿ ವಿದ್ಯುತ್ ಪ್ರಮುಖವಾದ ಪಾತ್ರ ನಿರ್ವಹಿಸುತ್ತಿದೆ ಪ್ರತಿಯೊಂದು ಬೀದಿ ದೀಪವು ಹೋಗುವರಿಗೆ ಮಾರ್ಗಸೂಚಿಯಾಗಿದೆ ವಿವಿಧ ಕಾರ್ಯ ಮತ್ತು ಚಟುವಟಿಕೆಗಳಲ್ಲಿ ಬೀದಿದೀಪವು ಅನಿವಾರ್ಯವಾಗಿದೆ ಪಂದ್ಯಾವಳಿಗಳಲ್ಲಿ ಮನೋರಂಜನ ಕಾರ್ಯಕ್ರಮದಲ್ಲಿ ಅಗತ್ಯವಾಗಿದೆ ಬೀದಿ ದೀಪದ ಮೂಲವಾದ ವಿದ್ಯುತ್ ಉತ್ಪಾದನೆ ಮತ್ತು ರಫ್ತಿನಲ್ಲಿ ಅನೇಕ ಬದಲಾವಣೆಯಾದರೆ ಕೈಗೊಂಡಂತ ಕಾರ್ಯಗಳು ಸ್ಥಗಿತಗೊಳ್ಳುವುದು ನಾವು ಗಮನಿಸಬಹುದು ರಸ್ತೆಯಲ್ಲಿ ರಾತ್ರಿ ನಡೆದಾಡುವವರಿಗೆ ಅತ್ಯುತ್ತಮವಾದ ಸಾಧನವಾಗಿದೆ ಹಾಗೆ ಯಾವುದೇ ಪಕ್ಷ...